ದಿನಭವಿಷ್ಯ | ಈ ರಾಶಿಯವರ ಪಾಲಿಗೆ ಇಂದು ಅತ್ಯಂತ ಶುಭದಿನ

ಮೇಷ
ಒತ್ತಡದ ಪರಿಸ್ಥಿತಿ ಎದುರಿಸಿದರೂ ಅದನ್ನು ಸಮರ್ಥವಾಗಿ ನಿಭಾಯಿಸುವಿರಿ. ಕುಟುಂಬಸ್ಥರ ಜತೆಗಿನ ವಿರಸ ಶಮನ, ಭಿನ್ನಮತ ನಿವಾರಣೆ.

ವೃಷಭ
ವೃತ್ತಿಯಲ್ಲಿ ಉದ್ದೇಶ ಸಾಧಿಸಲು ಕಠಿಣ ಶ್ರಮ ಅವಶ್ಯ. ಯಾವುದೂ ಸುಲಭವಾಗಿ ಇಂದು ನಿಮ್ಮ ಕೈಗೆಟುಕದು. ನಿಮ್ಮ ಗುರಿಗೆ ಕೆಲವರ ಅಡ್ಡಗಾಲು ಇರುವುದು.

ಮಿಥುನ
ಸಮಸ್ಯೆಯನ್ನು ಎದುರಿಸಿ. ಅದರಿಂದ ಹೆದರಿ ಓಡದಿರಿ. ನಿಮ್ಮ ಗುರಿ ತಲುಪುವ ಕಾಲ ಸನ್ನಿಹಿತವಾಗಿದೆ. ಇತರರ ನೆರವು ಕೇಳುವಲ್ಲಿ ಬಿಗುಮಾನ ಬಿಡಿ.

ಕಟಕ
ಮನೆಯಲ್ಲಿ ಅಭಿಪ್ರಾಯಭೇದ, ವಾಗ್ವಾದ ಸಂಭವ. ಸಹನೆಯಿಂದ ವರ್ತಿಸಿರಿ.  ವಿದ್ಯಾರ್ಥಿಗಳ ಪಾಲಿಗೆ ಇಂದು ಗುಣಾತ್ಮಕ ಬೆಳವಣಿಗೆ.

ಸಿಂಹ
ಕುಟುಂಬ ಸದಸ್ಯರಿಂದ ನೀವಾಗಿ ದೂರ ಸರಿಯಲು ಯತ್ನಿಸದಿರಿ. ಎಲ್ಲರೊಡನೆ ಹೊಂದಾಣಿಕೆ ಸಾಧಿಸಿ.  ವೃತ್ತಿಯಲ್ಲಿ ತುಸು ಅಸಮಾಧಾನ ಸಂಭವ.

ಕನ್ಯಾ
ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೇ ಸಂಶಯವಿದೆ. ಅದನ್ನು ಬಿಡಿ. ನೀವು ಯಾವುದೇ ಕಾರ್ಯವನ್ನು ಸಮರ್ಥವಾಗಿ ಪೂರೈಸಬಲ್ಲಿರಿ.

ತುಲಾ
ಕೆಲಸದಲ್ಲಿನ ನಿಮ್ಮ ದಕ್ಷತೆಯು ಮೆಚ್ಚುಗೆ ಗಳಿಸುವುದು. ಆದರೆ ದಿನದಂತ್ಯಕ್ಕೆ ಉದಾ ಸೀನತೆ ನಿಮ್ಮನ್ನು ಕಾಡ ಬಹುದು. ಆಯಾಸ ಇದಕ್ಕೆ ಕಾರಣ.

ವೃಶ್ಚಿಕ
ಮಾತಿನ ಮೇಲೆ ಇಂದು ಎಚ್ಚರವಿರಲಿ. ಇತರರಿಗೆ ಅಪ್ರಿಯವಾದುದನ್ನು ನೀವು ಅಚಾನಕ್ಕಾಗಿ ಮಾತನಾಡುವ ಸಾಧ್ಯತೆಗಳಿವೆ. ಅದಕ್ಕೆ ಅವಕಾಶ ಕೊಡದಿರಿ.

ಧನು
ವೃತ್ತಿಯಲ್ಲಿ ಏಳಿಗೆಗೆ ಹೆಚ್ಚು ಆದ್ಯತೆ ಕೊಡುವಿರಿ. ಈ ನಿಟ್ಟಿನಲ್ಲಿ ರಿಸ್ಕ್ ತೆಗೆದುಕೊಳ್ಳಲು ಹಿಂಜರಿಕೆ ಬೇಡ. ಅದರಿಂದ ನಿಮಗೆ ಒಳಿತೇ ಆಗುವುದು.

ಮಕರ
ಮನೆಯಲ್ಲಿ ಇಂದು ಸೌಹಾರ್ದಯುತ ವಾತಾವರಣ. ದೊಡ್ಡ ಕೆಲಸದ ಹೊರೆಯೊಂದು ಇಂದು ಕಳಚುವುದು. ವೃತ್ತಿಯಲ್ಲೂ ಎಲ್ಲವೂ ಸುಗಮವಾಗುವುದು.

ಕುಂಭ
ಆರೋಗ್ಯ  ಸಮಸ್ಯೆ ಕಾಡಬಹುದು. ಮಾನಸಿಕವಾಗಿಯೂ ಕುಗ್ಗುವಿರಿ. ಯೋಗ, ಧ್ಯಾನದಂತಹ ದಾರಿಗಳು ನಿಮಗೆ ಪೂರಕವಾಗಬಹುದು.

ಮೀನ
ಮುಖ್ಯ ವಿಷಯದಲ್ಲಿ ಯಾವ ದಾರಿ ಹಿಡಿಯಬೇಕು ಎಂಬ ಬಗ್ಗೆ ದ್ವಂದ್ವವಿದ್ದರೆ ಪ್ರಾಜ್ಞರ ಸಲಹೆ ಪಡೆಯಿರಿ. ಅದರಂತೆ ನಡಕೊಳ್ಳಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!