ದಿನಭವಿಷ್ಯ| ನಕಾರಾತ್ಮಕ ಚಿಂತನೆಗೆ ಒಳಗಾಗದಿರಿ..

ಮೇಷ
ನಿಮ್ಮ ದೃಢನಿಷ್ಠೆಯು ಎಂತಹ ಕಾರ್ಯವನ್ನೂ ಸಾಸಲು ನೆರ ವಾಗುವುದು. ಅಡ್ಡಿಗಳು ನಿಮಗೆ ಬಾಸಲಾರವು. ಕುಟುಂಬಸ್ಥರ ಸಹಕಾರ ಸಿಗುವುದು.

ವೃಷಭ
ಪ್ರೀತಿಪಾತ್ರರ ಜತೆ ಕಾಲ ಕಳೆಯುವ ಅವಕಾಶ. ಭಾವನಾತ್ಮಕ ಏರುಪೇರು ಅನುಭವಿಸುವಿರಿ. ಕೆಲವರ ಮಾತು ನಿಮಗೆ ಬೇಸರ ಉಂಟು ಮಾಡಬಹುದು.

ಮಿಥುನ
ಬಹುಕಾಲದ ಬಳಿಕ ನಿಮ್ಮ ಮಿತ್ರರನ್ನು ಭೇಟಿಯಾಗುವ ಅವಕಾಶ. ಗತ ನೆನಪುಗಳ ಮರುಕಳಿಕೆ. ಖರೀದಿಯಿಂದ ಹೆಚ್ಚು ಹಣ ಖರ್ಚು.

ಕಟಕ
ನೆಗೆಟಿವ್ ಚಿಂತನೆ ಗಳು ನಿಮ್ಮನ್ನು ಬಾಸಬಹುದು. ನೀವು ಕ್ಲಿಷ್ಟಕರ ಸ್ಥಿತಿ ಎದುರಿಸುತ್ತಿರುವುದು ಅದಕ್ಕೆ ಕಾರಣ. ಧೈರ್ಯ ತಂದುಕೊಳ್ಳಿ.

ಸಿಂಹ
ಆಪ್ತರೊಂದಿಗಿನ ಭಿನ್ನಮತ ನಿವಾರಣೆಗೆ ಒತ್ತು ಕೊಡಿ. ಇಲ್ಲವಾದರೆ ಮನಶ್ಯಾಂತಿ ಹಾಳು. ಅವರ ಭಾವನೆ ಕೂಡ ಅರ್ಥೈಸಿಕೊಳ್ಳಲು ಪ್ರಯತ್ನಿಸಿ.

ಕನ್ಯಾ
ಸಾಸಲಾಗದ ಕಾರ್ಯಕ್ಕೆ ಕೈ ಹಾಕಬೇಡಿ. ನಿಮ್ಮಿಂದ ಆಗುವಂತಹ ಗುರಿ ಮಾತ್ರ ಇಟ್ಟುಕೊಳ್ಳಿ. ಇಲ್ಲವಾದರೆ ನಿರಾಶೆ ಉಂಟಾದೀತು.

ತುಲಾ
ಬಂಧುಬಳಗದ ಜತೆ ಬೆರೆಯುವ ಅವಕಾಶ. ಕೌಟುಂಬಿಕ ಸಮಸ್ಯೆ ಪರಿಹಾರ ಕಾಣುವುದು. ಹಣದ ಕೊರತೆ ಕಾಡಿದರೂ ಖರೀದಿ ಉತ್ಸಾಹ ಕುಂದದು.

ವೃಶ್ಚಿಕ
ಎಲ್ಲ ಒತ್ತಡಗಳನ್ನು ಮರೆತು ನಿರಾಳ ವಾಗಿರಲು ಬಯಸುವಿರಿ. ಆದರೂ ಕೌಟುಂಬಿಕ ಒತ್ತಡ ಕಾಡಬಹುದು. ಬಂಧುಗಳಿಂದ ಹೆಚ್ಚಿನ ಬೇಡಿಕೆ.

ಧನು
ವಿರಾಮದ ದಿನ. ಉದ್ದೇಶಿತ ಕಾರ್ಯ ಪೂರೈಕೆ. ದಿನದಂತ್ಯಕ್ಕೆ ಎಲ್ಲ ವಿಷಯಗಳೂ ತೃಪ್ತಿಯಿಂದ ಮುಗಿಯುವವು. ಕೌಟುಂಬಿಕ ಶಾಂತಿ.

ಮಕರ
ಗುರಿ ಸಾಧನೆ. ಉದ್ದೇಶಿಸಿದ ಕಾರ್ಯ ಪೂರ್ಣ. ಹಾಗೆಂದು ಅಹಂಕಾರ ಬೇಡ. ಕಾರ್ಯದಲ್ಲಿ ಇತರರ ಸಹಕಾರ ಮತ್ತು ಪಾತ್ರ ಗೌರವಿಸಿ.

ಕುಂಭ
ಕೆಲವು ವಿಷಯಗಳಲ್ಲಿ ಕಠಿಣ ನಿಲುವು ತಾಳಬೇಕಾದೀತು. ಮುಲಾಜಿಗೆ ಒಳಗಾಗಿ ನಿಮ್ಮ ಹಿತಾಸಕ್ತಿ ಬಲಿಗೊಡಬೇಡಿ. ಆರ್ಥಿಕ ಅಸ್ಥಿರತೆ.

ಮೀನ
ಕ್ಲಿಷ್ಟಕರ ಪರಿಸ್ಥಿತಿ ಎದುರಾದೀತು. ಏಕಾಂಗಿತನ ಬಾಸುವುದು. ಕೆಲವು ಹೊಣೆಗಾರಿಕೆಯನ್ನು ನಿಭಾಯಿಸಬೇಕಾದ ಒತ್ತಡ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!