ದಿನಭವಿಷ್ಯ| ಇಂದು ಅದೃಷ್ಟ ನಂಬಿ ಕೂರಬೇಡಿ, ಆದರೆ ಪರಿಶ್ರಮ ಫಲ ನೀಡಲಿದೆ…

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಮೇಷ
ವೃತ್ತಿಕ್ಷೇತ್ರದಲ್ಲಿ ಎಂದಿಗಿಂತ ಹೆಚ್ಚು ಹೊಣೆಗಾರಿಕೆ. ಹಾಗಾಗಿ ಯೋಜನೆ ಹಾಕಿಕೊಂಡು ಮುಂದುವರಿಯಿರಿ. ಕೆಲ ವಿಷಯಗಳು ಉತ್ಸಾಹ ಕುಂದಿಸಬಹುದು.

ವೃಷಭ
ಅದೃಷ್ಟ ನಂಬಿ ಕೂರಬೇಡಿ. ನಿಮ್ಮ ಪ್ರಯತ್ನದಿಂದ ಮಾತ್ರ ಫಲ ಸಿಗುವುದು. ಕೆಲವು ಬೆಳವಣಿಗೆ ನಿಮ್ಮಲ್ಲಿ ಅಸಹನೆ ಮೂಡಿಸಬಹುದು.

ಮಿಥುನ
ಹಣಕಾಸು ವಿಚಾರದಲ್ಲಿ ರಿಸ್ಕ್ ತೆಗೆದುಕೊಳ್ಳಲು ಹಿಂಜರಿಕೆ ಬೇಡ. ಆದರೆ ತಜ್ಞರ ಸಲಹೆ ಪಡೆದು ಮುಂದೆ ಹೆಜ್ಜೆ ಇಡಿ. ವಿವಾಹಿತರಿಗೆ ಶುಭ ಬೆಳವಣಿಗೆ.

ಕಟಕ
ಒತ್ತಡ ಮತ್ತು ಚಿಂತೆಯನ್ನು ಮರೆಯಲು ನಿಮ್ಮ ಮೆಚ್ಚಿನ ಹವ್ಯಾಸಕ್ಕೆ ಗಮನ ಕೊಡಿ. ಆಪ್ತರ ಸಂಗದಲ್ಲಿ ಒತ್ತಡ ಮರೆಯಬಹುದು.

ಸಿಂಹ
ಬದಲಾವಣೆಗೆ ಅಂಜದಿರಿ. ಅದಕ್ಕೆ ಹೊಂದಿಕೊಳ್ಳಲು ಕಲಿಯಿರಿ. ಅದುವೇ ನಿಮಗೆ ಯುಕ್ತ ವಾದುದು. ಕೌಟುಂಬಿಕ ಸಹಕಾರ, ನೆಮ್ಮದಿ.

ಕನ್ಯಾ
ಕೌಟುಂಬಿಕ ಭಿನ್ನಮತ, ವಾಗ್ವಾದ ನಡೆದೀತು. ನಿಮ್ಮ ಮಾತುಗಳನ್ನು ಇತರರು ಒಪ್ಪಿಕೊಳ್ಳ ಲಾರರು. ಆರೋಗ್ಯದ ಕಡೆ ಗಮನ ಕೊಡಿ. ಆರ್ಥಿಕ ಕೊರತೆ.

ತುಲಾ
ಒತ್ತಡ ಹೆಚ್ಚಿಸುವ ಪರಿಸ್ಥಿತಿಯಿಂದ ದೂರವಿರಿ. ವಾಗ್ವಾದಕ್ಕೆ ಇಳಿಯಬೇಡಿ. ಆರ್ಥಿಕ ಬಿಕ್ಕಟ್ಟು ಕಾಡಬಹುದು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಫಲ.

ವೃಶ್ಚಿಕ
ವೃತ್ತಿಯಲ್ಲಿ ಹೆಚ್ಚು ಒತ್ತಡ. ಇತರರ ಕಾರ್ಯದ ಒತ್ತಡ ನಿಮ್ಮ ಮೇಲೆ ಬೀಳಬಹುದು. ನಿಮ್ಮ ಕೋಪತಾಪದ ಮೇಲೆ ನಿಯಂತ್ರಣವಿಡಿ. ಕೌಟುಂಬಿಕ ಉದ್ವಿಗ್ನತೆ.

ಧನು
ವಿಭಿನ್ನ ಬಗೆಯ ಆಹಾರ ಸೇವನೆಯಿಂದ ಸಮಸ್ಯೆ ಎದುರಿಸುವಿರಿ. ಹಿತಮಿತ ಸಾಸಿ. ಕೆಲವರ ವರ್ತನೆ ನಿಮಗೆ ಅಸಹನೀಯ ಎನಿಸಬಹುದು.

ಮಕರ
ಭಾವನಾತ್ಮಕ ಏರುಪೇರು ಅನುಭವಿಸುವಿರಿ. ಇದರಿಂದ ನಿಮ್ಮ ವೃತ್ತಿಯ ಮೇಲೂ ಪರಿಣಾಮ. ಆತ್ಮೀಯ ಸಂಬಂಧ ಕೆಡಲು ಆಸ್ಪದ ಕೊಡಬೇಡಿ.

ಕುಂಭ
ಬಾಕಿ ಇರುವ ಕೆಲಸ ಮುಗಿಸಲು ಆದ್ಯತೆ ಕೊಡಿ. ಇತರರ ಸಹಕಾರ ಪಡೆಯಲು ಹಿಂಜರಿಯದಿರಿ. ಕೌಟುಂಬಿಕ ಹೊಣೆ ಹೆಚ್ಚುವುದು.

ಮೀನ
ಧಾರ್ಮಿಕ ವಿಚಾರಗಳು ಇಂದು ನಿಮ್ಮನ್ನು ಹೆಚ್ಚು ಆಕರ್ಷಿಸುತ್ತವೆ. ಸಹೋದ್ಯೋಗಿಗೆ ನೆರವು ನೀಡಬೇಕಾದ ಪ್ರಸಂಗ ಬರುವುದು. ಆರ್ಥಿಕ ಒತ್ತಡ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!