ಹಿಜಾಬ್ ವಿವಾದ ಪೂರ್ವನಿಯೋಜಿತ ಅನ್ನೋದಕ್ಕೆ ಸಾಲು ಸಾಲು ಪುರಾವೆಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್

ಕರ್ನಾಟಕದಲ್ಲಿ ಹಿಜಾಬ್ ವಿವಾದ ಪೂರ್ವನಿಯೋಜಿತವಾಗಿತ್ತೇ? ಹೌದೆಂಬುದಕ್ಕೆ ಈಗ ಹಲವು ಪುರಾವೆಗಳು ಎದುರಿಗಿವೆ.

  • ಅಷ್ಟು ವರ್ಷಗಳ ಕಾಲ ತರಗತಿಯೊಳಗೆ ಹಿಜಾಬಿಗೆ ಆಗ್ರಹಿಸದಿದ್ದವರಿಗೆ ಅದು ಬೇಕು ಎನಿಸಿದ್ದಕ್ಕೆ ಅದರ ಹಿಂದೆ ಯೋಜನೆಯೊಂದು ಕೆಲಸ ಮಾಡಿರುವುದು ಸ್ಪಷ್ಟವಾಗಿದೆ.
  • ಇದರ ಹಿಂದಿದೆ ‘ಕ್ಯಾಂಪಸ್ ಫ್ರಂಟ್ ಇಂಡಿಯಾ’ ಎಂಬ ಇಸ್ಲಾಮಿಕ್ ಸಂಘಟನೆ
  • ಹಿಜಾಬ್ ಬೇಕೆಂದು ಪ್ರಾರಂಭದಲ್ಲಿ ಧ್ವನಿ ಎತ್ತಿದ ಆರು ಹುಡುಗಿಯರು ಹಾಗೆ ಮಾಡಿದ್ದು ‘ಆತ್ಮದ ಕರೆ’ ಕೇಳಿ ಅಲ್ಲ, ಈ ಸಿ ಎಫ್ ಐ ಸಂಘಟನೆಯ ಪ್ರೇರಣೆಯಿಂದಲೇ.
  • ಸಿ ಎಫ್ ಐ ನಿರ್ದೇಶನದ ಮೇರೆಗೆ ಮಾಡುತ್ತಿದ್ದ ಇವರ ಮಕ್ಕಿಕಾಮಕ್ಕಿ ಟ್ವೀಟುಗಳೇ ಇವರ ಪೂರ್ವ ಸಂಯೋಜಿತ ಕಾರ್ಯಸೂಚಿಯನ್ನು ಬೆತ್ತಲಾಗಿಸಿದೆ.

ಈಗ ವಿವರಗಳಿಗೆ ಹೋಗೋಣ ಬನ್ನಿ. ಇದೊಂದು ಪೂರ್ವನಿಯೋಜಿತ ಸಂಚಾಗಿತ್ತು ಎಂಬುದನ್ನು ಎಳೆಎಳೆಯಾಗಿ ಬಿಡಿಸಿಟ್ಟ ಖ್ಯಾತಿ ಟ್ವಿಟ್ಟರಿನಲ್ಲಿ ಸಕ್ರಿಯರಾಗಿರುವ ವಿಜಯ ಪಟೇಲ ಎನ್ನುವವರಿಗೆ ಸಲ್ಲುತ್ತದೆ. ಸೆಪ್ಟೆಂಬರ್ 2021ಕ್ಕೆ ಸಿ ಎಫ್ ಐ ಉಡುಪಿಯೂ ಸೇರಿದಂತೆ ಹಲವು ಕ್ಯಾಂಪಸ್ಸುಗಳಲ್ಲಿ ತನ್ನ ಸದಸ್ಯತ್ವ ಅಭಿಯಾನ ಶುರು ಮಾಡುತ್ತದೆ.

 

ಇವತ್ತು ಹಿಜಾಬ್ ಒತ್ತಾಯ ಉಡುಪಿಯಲ್ಲಿ ಯಾವ ವಿದ್ಯಾರ್ಥಿನಿಯರಿಂದ ಶುರುವಾಯ್ತೋ- ಮುಸ್ಕಾನ್, ಆಯೇಷಾ- ಇತ್ಯಾದಿ ಇದೇ ಸದಸ್ಯತ್ವ ಅಭಿಯಾನದಡಿ ಸಿ ಎಫ್ ಐಗೆ ಸೇರ್ಪಡೆಯಾದವರು. ಇವರೆಲ್ಲ ಟ್ವಿಟ್ಟರ್ ಖಾತೆ ತೆರೆದು ಕಟ್ಟರ್ ಇಸ್ಲಾಮಿಕ್ ವಿಚಾರಗಳನ್ನು ಟ್ವೀಟ್ ಮಾಡಲಿಕ್ಕೆ ಆರಂಭಿಸಿದ್ದು ಅಕ್ಟೋಬರ್ 2021ರಿಂದ.

ಇವರು ಟ್ವೀಟ್ ಮಾಡಿದ ರೀತಿಯೂ ಬಹಳ ಸ್ಪಷ್ಟವಾಗಿದೆ. ಇಸ್ಲಾಂವಾದದ ಪರ ಯಾವೆಲ್ಲ ವಿಚಾರಗಳನ್ನು ಸಿ ಎಫ್ ಐ ತನ್ನ ಖಾತೆಯಿಂದ ಹೇಳುತ್ತಿತ್ತೋ, ಹಿಜಾಬ್ ಹೋರಾಟದ ಈ ಹುಡುಗಿಯರು ಅದನ್ನೇ ತಮ್ಮ ಖಾತೆಗಳಲ್ಲಿ ಟ್ವೀಟ್ ಮಾಡಿದ್ದಾರೆ. ಇವರೆಲ್ಲ ಟ್ವೀಟುಗಳಲ್ಲಿ ಒಂದೆರಡು ಶಬ್ದ ಬಿಟ್ಟರೆ ಉಳಿದಿದ್ದೆಲ್ಲ ಕಾಪಿ-ಪೇಸ್ಟ್. ಅರ್ಥಾತ್ ಸಿ ಎಫ್ ಐ ಜತೆ ಸೇರಿಕೊಂಡು ಕ್ಯಾಂಪಸ್ಸುಗಳಲ್ಲಿ ಅಸ್ಥಿರತೆ ಹರಡಲು, ಅವುಗಳನ್ನು ಇಸ್ಲಾಮೀಕರಣಗೊಳಿಸಲು ಇವರು ತಿಂಗಳುಗಳಿಂದ ಯೋಜನಾಬದ್ಧವಾಗಿ ಶ್ರಮಿಸಿದ್ದಾರೆ.

 

ಕೇವಲ ಹಿಜಾಬ್ ಮಾತ್ರವೇ ಈ ಹುಡುಗಿಯರ ವಿಷಯವಲ್ಲ, ಬದಲಿಗೆ ಸಿ ಎಫ್ ಐನ ಎಲ್ಲ ಇಸ್ಲಾಮೀಕರಣದ ದಾಳಗಳ ಜತೆಗೂ ಇವರಿದ್ದಾರೆ ಎಂಬುದಕ್ಕೆ, ಸಿ ಎಫ್ ಐ ಎಂಬ ಮತೀಯ ವಿದ್ಯಾರ್ಥಿ ಸಂಘಟನೆ ಆಜಾನ್ ಅನ್ನು ಸಮರ್ಥಿಸಿಕೊಂಡು ಇದಕ್ಕೆ ವಿರೋಧಿಸುವ ಹಿಂದುಗಳು ನೇಪಾಳಕ್ಕೆ ಕಾಲ್ಕೀಳಲಿ ಎಂದಿರುವ ಟ್ವೀಟ್ ಅನ್ನು ಇವರೆಲ್ಲ ಅದೇ ಶಬ್ದಗಳಲ್ಲಿ ಹಂಚಿಕೊಂಡಿರುವುದನ್ನು ಗಮನಿಸಬಹುದು.

 

ಇವತ್ತಿಗೆ ಇದೇ ಹಿಜಾಬ್ ಅಭಿಯಾನದಲ್ಲಿರುವ ಅನೇಕ ಹುಡುಗಿಯರು ಸಾರ್ವಜನಿಕವಾಗಿ ಬೇರೆ ಬೇರೆ ಧಿರಿಸುಗಳಲ್ಲಿರುವ, ಆಧುನಿಕ ಧಿರಿಸುಗಳಲ್ಲಿ ವಿಹರಿಸುತ್ತಿರುವ ಫೋಟೊಗಳು ಸಾಕಷ್ಟು ಲಭ್ಯವಾಗಿವೆ. ಹೀಗಾಗಿ, ತಾವು ‘ಧರ್ಮಬದ್ಧ’ರಾಗಿ ಹಿಜಾಬ್ ಧರಿಸುತ್ತಿದ್ದೇವೆ ಎಂಬ ಇವರ ವಾದವೇ ಅನುಕೂಲಸಿಂಧು ಹಾಗೂ ಶಾಲಾ ಆವರಣವನ್ನು ಇಸ್ಲಾಮೀಕರಣಗೊಳಿಸುವ ಸ್ಪಷ್ಟ ತಂತ್ರ.

ಇವರ ಈ ಕಾರ್ಯಯೋಜನೆಗಳಿಗೆ ಮಾಧ್ಯಮದ ಒಂದು ವರ್ಗ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ವಕೀಲರು ಕೈಜೋಡಿಸಿರುವುದು ಹಿಜಾಬ್ ಹೆಸರಲ್ಲಿ ಹಾಕಿಕೊಂಡಿರುವ ಬಹುದೊಡ್ಡ ವಿಘಟನಾ ಕಾರ್ಯಸೂಚಿಯ ಕತೆಯನ್ನು ಸ್ಪಷ್ಟವಾಗಿ ಸಾರುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!