ಹೊಸದಿಗಂತ ವರದಿ ಹುಬ್ಬಳ್ಳಿ:
ಹಳೆ ಹುಬ್ಬಳ್ಳಿಯ ಗಲಭೆಗೆ ಸಂಬಂಧಿಸಿದ ಮಾಸ್ಟರ್ ಮೈಂಡ್ಗಾಗಿ ಪೊಲೀಸರು ತೀವ್ರ ಕಾರ್ಯಚರಣೆ ನಡೆಸಿದ್ದಾರೆ. ಗಲಭೆ ವೇಳೆ ಪೊಲೀಸ್ ಕಾರಿನ ಮೇಲೆ ನಿಂತು ಭಾಷಣ ಮಾಡುತ್ತಿದ್ದ ವಿಡಿಯೋ ವೈರಲ್ ಆಗುತ್ತಿದಂತೆ ಮೌಲ್ವಿ ನಾಪತ್ತೆಯಾಗಿದ್ದಾನೆ.
ಪೊಲೀಸರು ಇವನನ್ನು ಸೇರೆ ಹಿಡಿಯಲು ಶೋಧ ನಡೆಸಿದ್ದು, ಪ್ರತ್ಯೇಕ ಎಂಟು ತಂಡಗಳಲ್ಲಿ ಬೆಳಗಾವಿ, ಶಿಗ್ಗಾವಿ, ಸವಣೂರ ಸೇರಿದಂತೆ ವಿವಿಧ ಪ್ರದೇಶಗಳಿಗೆ ತೆರಳಿದ್ದಾರೆ. ಈ ಮೌಲ್ವಿ ಗಲಭೆಗೆ ಪ್ರಚೋದನೆ ನೀಡಿದ್ದಾನೆ ಎಂದು ತಿಳಿದುಬಂದಿದೆ.
ಪೊಲೀಸರು ಮೌಲ್ವಿಗೆ ಖುದ್ದು ಶರಣಾಗತಿ ಆಗುವಂತೆ ಅವರ ಕುಟುಂಬಕ್ಕೆ ಸೂಚಿಸಿದ್ದಾರೆ. ಇಲ್ಲವಾದಲ್ಲಿ ಮುಂದಾಗುವ ಅನಾಹುತಕ್ಕೆ ಆತನೇ ಜವಾಬ್ದಾರಿ ಎನ್ನಲಾಗಿದೆ. ಸಂಜೆಯ ಒಳಗೆ ಬಂಧಿಸುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದಿದೆ. ಗಲಭೆಗೆ ಸಂಬಂಧಿಸಿದ 89 ಆರೋಪಿಗಳನ್ನು ಕಲಬುರಗಿಗೆ ಶಿಪ್ಟ್ ಮಾಡಲಾಗಿದೆ. ಇಂದು ಸಹ 4 ಜನರನ್ನು ವಶಕ್ಕೆ ಪಡೆಯಲಾಗಿದೆ.