ಹೊಸದಿಗಂತ ಡಿಜಿಟಲ್ ಡೆಸ್ಕ್:
ಆತಂಕ ಹುಟ್ಟಿಸಿರುವ ಅಸಾನಿ ಚಂಡಮಾರುತ ಇಂದು ಸಂಜೆ ಆಂಧ್ರದ ಮಚಲೀಪಟ್ಟಣ ಕರಾವಳಿಗೆ ಅಪ್ಪಳಿಸಲಿದ್ದು, ಬಳಿಕ ಶಿಥಿಲಗೊಳ್ಳುವ ಸಾಧ್ಯತೆ ಕಂಡುಬಂದಿದೆ.
ಹಲವೆಡೆ ಅಬ್ಬರಿಸಲಿದೆ ಅಸಾನಿ
ಆಂಧ್ರದ ಭೀಮಾವರಂ, ಎಲೂರು, ವಿಜಯವಾಡ ಹಾಗೂ ತೆನಾಲಿ ಭಾಗಗಳಲ್ಲಿ ತನ್ನ ಉಗ್ರರೂಪ ತೋರಲಿರುವ ಚಂಡಮಾರುತ, ಭಾರೀ ಪ್ರಮಾಣದಲ್ಲಿ ಅಪಾಯ, ಹಾನಿ ಉಂಟುಮಾಡುವ ಸಾಧ್ಯತೆಗಳಿವೆ.
ರಾಜ್ಯಕ್ಕೂ ಇದೆ ಇಫೆಕ್ಟ್
ಆಂಧ್ರಕ್ಕೆ ಹೆಚ್ಚಿನ ಆಘಾತ ನೀಡಲಿರುವ ಚಂಡಮಾರುತ, ಕರ್ನಾಟಕದ ಕೆಲವೆಡೆಗಳಲ್ಲಿಯೂ ತನ್ನ ಪ್ರಭಾವ ತೋರಲಿದೆ. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು, ರಾಮನಗರ, ಮಂಡ್ಯ, ಚಾಮರಾಜನಗರ, ಹಾಸನ, ಮೈಸೂರು, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ಎಚ್ಚರಿಕೆ ವಹಿಸಲು ಆಡಳಿತಗಳು ಸೂಚಿಸಿವೆ. ರಾಜ್ಯದ ಉಳಿದ ಭಾಗಗಳಲ್ಲಿ ಮೋಡ ಕವಿದ ಸ್ಥಿತಿ ಮುಂದುವರಿಯಲಿದೆ.
ಕರಾವಳಿಗೆ ಕಾಡದು ಅಸಾನಿ
ಕಾಸರಗೋಡು, ಕರ್ನಾಟಕದ ಕರಾವಳಿ ಜೆಲ್ಲೆಗಳಾದ್ಯಂತ ಮೋಡ, ಅಲ್ಲಲ್ಲಿ ತುಂತುರು ಮಳೆಯ ವಾತಾವರಣ ಮುಂದುವರಿಯಲಿದೆ.
ಮುಂಗಾರು ರೀತಿಯ ಮೋಡದ ಚಲನೆ ಇದ್ದರೂ ಮಳೆಯ ಸಾಧ್ಯತೆ ಮಾತ್ರ ಕಡಿಮೆ ಇರಲಿದೆ. ಮುಂದಿನ ಒಂದೆರಡು ದಿನಗಳ ಕಾಲ ಇದೇ ವಾತಾವರಣ ಮುಂದುವರಿಯುವ ಸಾಧ್ಯತೆ ದಟ್ಟವಾಗಿ ಗೋಚರಿಸಿದೆ.