ನನ್ನ ಜೀವನದಲ್ಲಿ ಶೇ.10ರಷ್ಟು ನೆಮ್ಮದಿ ಇಲ್ಲ: ಅಚ್ಚರಿಯ ಹೇಳಿಕೆಕೊಟ್ಟ ಸೂಪರ್​ ಸ್ಟಾರ್ ರಜನಿಕಾಂತ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಸೂಪರ್​ ಸ್ಟಾರ್ ರಜನಿಕಾಂತ್ ತಮ್ಮ ಜೀವನದ ಬಹುದೊಡ್ಡ ಗುಟ್ಟನ್ನು ಅಭಿಮಾನಿಗಳ ಮುಂದೆ ಹೇಳಿಕೊಂಡಿದ್ದಾರೆ.
ಇಡೀ ವಿಶ್ವದಲ್ಲಿ ಅಭಿಮಾನಿಗಳನ್ನು ಹೊಂದಿರುವ ನಟ ರಜನಿಕಾಂತ್ ತಮ್ಮ ಜೀವನದಲ್ಲಿ ಪಡೆದಿದ್ದೇನು ಎಂಬ ಬಗ್ಗೆ ಬಹಿರಂಗಪಡಿಸಿದ್ದಾರೆ.

ಬಸ್​ ಕಂಡಕ್ಟರ್​ ಆಗಿದ್ದ ರಜನಿಕಾಂತ್​​ ಜಗತ್ತಿಗೆ ಸೂಪರ್​ ಸ್ಟಾರ್​ ಬೆಳೆದಿರುವ ರಜಿನಿ ಜೀವನದಲ್ಲಿ ನೂರಾರು ಕೋಟಿ ಆಸ್ತಿಯ ಒಡೆಯ. ಆದರೀಗ ಸ್ವತಃ ಅವರೇ ಹೇಳುವಂತೆ ಹಣದಿಂದ ಎಲ್ಲವನ್ನೂ ಪಡೆಯಲು ಸಾಧ್ಯವಿಲ್ಲ. ನನ್ನ ಜೀವನದಲ್ಲಿ ಶೇ.10ರಷ್ಟು ಸಂತೋಷ ನೆಮ್ಮದಿ ಉಳಿಯಲಿಲ್ಲ ಎಂದು ಹೇಳಿದ್ದಾರೆ.

‘Happy Successful Life through Kriya Yoga’ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿರುವ ರಜನಿಕಾಂತ್​, ನಾನು ಅದ್ಭುತ ನಟ ಎಂದು ಎಲ್ಲರೂ ಹೇಳುತ್ತಾರೆ. ಇದು ಪ್ರಶಂಸೆಯೋ,ವಿಮರ್ಶೆಯೋ ಗೊತ್ತಾಗುತ್ತಿಲ್ಲ. ಶ್ರೀ ರಾಘವೇಂದ್ರ ಹಾಗೂ ಬಾಬಾ ಇವೆರಡು ನನಗೆ ಸಂತೃಪ್ತಿ ನೀಡಿದ ಸಿನಿಮಾಗಳು. ಈ ಸಿನಿಮಾಗಳನ್ನು ನೋಡಿದ ಮೇಲೆ ಹಲವರು ಹಿಮಾಲಯಕ್ಕೂ ಹೋಗಿ ಬಂದಿದ್ದಾರೆ. ಸನ್ಯಾಸಿಗಳಾಗಿ ಬದಲಾಗಿದ್ದಾರೆ. ಆದರೆ ನಾನು ನಟನಾಗಿ ಮಾತ್ರ ಇಲ್ಲೇ ಉಳಿದಿದ್ದೇನೆ ಎಂದಿದ್ದಾರೆ.
ರಜನಿಕಾಂತ್​ ಅವರ ಈ ಹೇಳಿಕೆಯಿಂದ ಅಭಿಮಾನಿಗಳಲ್ಲಿ ಅಚ್ಚರಿಯುಂಟಾಗಿದೆ. ಒಬ್ಬ ದೊಡ್ಡ ನಟನ ಜೀವನದಲ್ಲಿ ನೆಮ್ಮದಿ ಇಲ್ಲವೇ ಎಂಬ ಪ್ರಶ್ನೆಯೂ ಮೂಡಿದೆ.ಇದರ ನಡುವೆ ತಮ್ಮ ಇಬ್ಬರು ಹೆಣ್ಣುಮಕ್ಕಳು ವಿಚ್ಚೇದನ ಪಡೆದಿದ್ದು, ಅವರ ಜೀವನದ ಬಗ್ಗೆ ಸೂಪರ್​ಸ್ಟಾರ್​ಗೆ ಚಿಂತೆ ಇರಬಹುದು ಎಂಬ ಮಾತು ಕೇಳಿಬರುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!