‘ರಾಜಕಾರಣದಲ್ಲಿ ಸಿದ್ದರಾಮಯ್ಯನಂಥ ದ್ರೋಹಿಯನ್ನು ಹಿಂದೆ ನೋಡಿಲ್ಲ, ಮುಂದೆ ನೋಡೋದೂ ಇಲ್ಲ’

ಹೊಸದಿಗಂತ ವರದಿ ಬಾಗಲಕೋಟೆ:

ಕರ್ನಾಟಕ ರಾಜಕಾರಣದಲ್ಲಿ ಸಿದ್ದರಾಮಯ್ಯನಂತ ದ್ರೋಹಿಯನ್ನ ಹಿಂದೆ ನೋಡಿಲ್ಲ, ಮುಂದೆಯೂ ನೋಡಿಲ್ಲ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಮಾಜಿ ಸಿಎಂ ಸಿದ್ದರಾಮಯ್ಯನವರ ವಿರುದ್ಧ ಹರಿಹಾಯ್ದಿದ್ದಾರೆ.
ಅವರು ಬಾಗಲಕೋಟೆ ನಗರದಲ್ಲಿ ಬಿಜೆಪಿ ಪಕ್ಷದ ಕಚೇರಿ ಉದ್ಘಾಟನೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡುತ್ತಾ,ಬಸವರಾಜ್ ಬೊಮ್ಮಾಯಿ ವೀಕ್ ಲೀಡರ್ ಅಂತ ಪದೇ ಪದೇ ಹೇಳ್ತಿರೋ ಸಿದ್ದರಾಮಯ್ಯಗೆ ಈಶ್ವರಪ್ಪ ಟಕ್ಕರ್ ನೀಡಿದ್ದಾರೆ.

ಸಿದ್ದರಾಮಯ್ಯ ವೀಕ್ ಲೀಡರ್ ಆಗಿದ್ದಕ್ಕೆ ಸೋತಿದ್ದು. ಸ್ಟ್ರಾಂಗ್ ಸಿಎಂ ಆಗಿದ್ದರೆ ಯಾಕೆ ಸೋಲುತ್ತಿದ್ದರು.? ಸ್ಟ್ರಾಂಗ್ ಸಿಎಂ‌ ಆಗಿದ್ರೆ ಕಾಂಗ್ರೆಸ್ ಯಾಕೆ ಸೋಲುತ್ತಿತ್ತು. ಎಂದು ಪ್ರಶ್ನೆ ಮಾಡಿದ ಅವರು,
] ಯಾವಾಗಲೂ ಕೂಡ ನೀನು ವೀಕ್ ಅಂತ ಹೇಳೋರು ಯಾರು.?ಯಾರೂ ತಾನು ವೀಕ್ ಇರ್ತಾರೋ ಅವರೇ ಹೇಳುತ್ತಾರೆ.ಬೊಮ್ಮಾಯಿ ವೀಕ್ ಅಂತ ಹೇಳಿ ಇವರು ಸ್ಟ್ರಾಂಗ್ ಅಂತಿದ್ದಾರೆ ಇರಲಿ.

ನೀನು(ಸಿದ್ದರಾಮಯ್ಯ) ಬಹಳ ಸ್ಟ್ರಾಂಗ್ ಪ್ಪ,ನಿಮ್ಮ ಅಪ್ಪ ಅಮ್ಮ ಯಾರೂ ಅಂತಲೇ ನೀವು ಹೇಳ್ತಿಲ್ಲ.ಒಂದ್ಸಾರಿ ಬಾದಾಮಿ, ಒಂದ್ಸಾರಿ ಕೊಪ್ಪಳ ಅಂತೀರಿ, ಕೋಲಾರ ಅಂತೀರಿ, ಈಗ ವರುಣ ಅಂತೀರಿ.ನಿಮಗೆ ನಿಮ್ಮ ಅಪ್ಪ ಅಮ್ಮ ಯಾರೂ ಅಂತಲೇ ಗೊತ್ತಿಲ್ಲ. ನಿಮ್ಮ ಕ್ಷೇತ್ರವೇ ಗೊತ್ತಿಲ್ಲ.ಬಿಜೆಪಿಯಲ್ಲಿ ಅಭಿವೃದ್ಧಿ ನೋಡಿ ನೀವೆ ನಿಲ್ಲಿ ಅನ್ನೋ ಪರಿಸ್ಥಿತಿ ಇದೆ.ಕ್ಯಾಪ್ಟನ್ ಗೆ ಪ್ಲೇಸ್ ಇಲ್ಲ, ಪಾಪ ಫಾಲೋವರ್ಸ್ ಗತಿಯೇನು.? ಎಂದು ಸಿದ್ದರಾಮಯ್ಯನವರ ವ್ಯಂಗ್ಯ ವಾಡಿದರು.ಸಿದ್ದರಾಮಯ್ಯ ಆಡುವ ಆಟ ಬಿಜೆಪಿ ಮೇಲೆ ಅಲ್ಲ.ಅವರ ಆಟ ಬಿಜೆಪಿ ಮೇಲೆ ನಡೆಯಲ್ಲ.

ರಾಜ್ಯದ ಜನರ ಮೇಲೂ ನಡೆಯಲ್ಲ, ಕಾಂಗ್ರೆಸ್ ನಲ್ಲಿ ಮಾತ್ರ ನಡೆಯೋದು,ಬಿಜೆಪಿ ಕೆಜೆಪಿ ಒಡೆದು ಸಿದ್ದರಾಮಯ್ಯ ಸಿಎಂ ಆದರು.ಈಗ ಬಿಜೆಪಿ ಒಡೆಯಲು ಆಗ್ತಿಲ್ಲ.ಹೀಗಾಗಿ ಬೊಮ್ಮಾಯಿ ನಾಯಕತ್ವ ಸರಿಯಿಲ್ಲ ಅಂತಿದ್ದಾರೆ. ಸಿದ್ದರಾಮಯ್ಯ ಜಾತಿ ಹೆಸರಲ್ಲಿ ಓಟ್ ತೆಗೆದುಕೊಳ್ಳುವ ಪ್ರಯತ್ನ ಮಾಡ್ತಿದ್ದಾರೆ.ಕುರುಬರ, ಹಿಂದುಳಿದವರ, ಅಲ್ಪಸಂಖ್ಯಾತರ ನಾಯಕ ನಾನು ಅಂತಿದ್ದಾರೆ.ನಾನು ಎಲ್ಲ ಜನಾಂಗದ ನಾಯಕ ಅಂತ ಬಾಯಾಗ ಆದ್ರೂ ಹೇಳು.

ನೀನು ಎಲ್ಲ ಜನಾಂಗದ ನಾಯಕನಾಗಲು ಆಗಲ್ಲ. ಕುರುಬರ ನಾಯಕನೂ ಆಗೋಲ್ಲ.ಇಡೀ ರಾಜ್ಯದ ತುಂಬ ಅಭಿವೃದ್ಧಿ ಮತ್ತು ಕಟೀಲ್ ನೇತೃತ್ವದಲ್ಲಿ ಸಂಘಟನೆ ಆಗ್ತಿದೆ. ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ಬೊಮ್ಮಾಯಿ, ಯಡಿಯೂರಪ್ಪ ನಾಯಕತ್ವ .ನೇತೃತ್ವ ಇದೆ. ಅಭಿವೃದ್ದಿ, ಸಂಘಟನೆ ಮೇಲೆ ಬಿಜೆಪಿಯವರು ಗೆಲ್ಲುತ್ತೇವೆ ಎಂದರು. ಶಾಸಕ ವೀರಣ್ಣ ಚರಂತಿಮಠರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!