ಹೊಸದಿಗಂತ ಡಿಜಿಟಲ್ ಡೆಸ್ಕ್ :
ಭಾರತ ತಂಡದ ವಿಕೆಟ್ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ (Rishabh Pant) ಕಾರು ಅಪಘಾತದ ಬಳಿಕ ಮೊದಲ ಬಾರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಹಾಗೂ ಹಿತೈಷಿಗಳಿಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ತಮ್ಮ ಆರೋಗ್ಯ ಸುಧಾರಣೆಯ ಶುಭ ಸಂದೇಶವನ್ನು ಅವರು ಕಳುಹಿಸಿದ್ದಾರೆ.
‘ನಿಮ್ಮೆಲ್ಲರ ಹಾರೈಕೆ ಹಾಗೂ ಬೆಂಬಲಕ್ಕೆ ನಾನು ಋಣಿಯಾಗಿದ್ದೇನೆ. ನಾನು ಒಳಪಟ್ಟಿರುವ ಶಸ್ತ್ರಚಿಕಿತ್ಸೆಯು ಯಶಸ್ವಿಯಾಗಿದೆ. ಈಗಾಗಲೇ ಗುಣಮುಖನಾಗುತ್ತಿದ್ದು, ಮುಂದಿನ ಸವಾಲುಗಳನ್ನು ಸ್ವೀಕರಿಸಲು ಆದಷ್ಟು ಬೇಗ ಸಿದ್ಧಗೊಳ್ಳುವೆ. ಬಿಸಿಸಿಐ ಕಾರ್ಯದರ್ಶಿ ಜಯ್ಶಾ, ಬಿಸಿಸಿಐ ಹಾಗೂ ಸರಕಾರದ ಪ್ರಾಧಿಕಾರಗಳು ನೀಡಿದ ಬೆಂಬಲಕ್ಕೆ ನನ್ನ ಹೃದಯ ತುಂಬಿದ ಧನ್ಯವಾದಗಳು. ನನ್ನ ಬೆಂಬಲಿಗರು, ಸಹ ಆಟಗಾರರು, ವೈದ್ಯರ ತಂಡ ನೀಡಿದ ಬೆಂಬಲ ಹಾಗೂ ಧೈರ್ಯಕ್ಕೆ ಧನ್ಯವಾದಗಳು. ನಿಮ್ಮೆಲ್ಲರನ್ನೂ ಕ್ರಿಕೆಟ್ ಮೈದಾನದಲ್ಲಿ ನೋಡುವಾಸೆ’ ಎಂದು ರಿಷಭ್ ಪಂತ್ ಅವರು ಟ್ವೀಟ್ ಮಾಡಿದ್ದಾರೆ.
I am humbled and grateful for all the support and good wishes. I am glad to let you know that my surgery was a success. The road to recovery has begun and I am ready for the challenges ahead.
Thank you to the @BCCI , @JayShah & government authorities for their incredible support.— Rishabh Pant (@RishabhPant17) January 16, 2023
ಬಿಸಿಸಿಐ ನೀಡಿರುವ ಪಂತ್ ವೈದ್ಯಕೀಯ ವರದಿ ಪ್ರಕಾರ ಐಪಿಎಲ್, ಮುಂದಿನ ಏಕ ದಿನ ವಿಶ್ವ ಕಪ್ ಸೇರಿದಂತೆ ಎಲ್ಲ ಟೂರ್ನಿಗಳಿಂದ ಅವರು ಹೊರಕ್ಕೆ ಉಳಿಯಲಿದ್ದಾರೆ.
From the bottom of my heart, I also would like to thank all my fans, teammates, doctors and the physios for your kind words and encouragement. Looking forward to see you all on the field. #grateful #blessed
— Rishabh Pant (@RishabhPant17) January 16, 2023
ರಿಷಭ್ ಪಂತ್ ಅವರು ಕಳೆದ ತಿಂಗಳು 30ರಂದು ದೆಹಲಿಯಿಂದ ತಮ್ಮೂರು ಉತ್ತರಾಖಂಡದ ರೂರ್ಕಿಗೆ ಹೋಗುವಾಗ ಕಾರು ಅವಘಡಕ್ಕೆ ಒಳಗಾಗಿದ್ದರು.