ಎಲ್ಲಾ ಪ್ರಶ್ನೆಗಳಿಗೂ ಶೀಘ್ರ ಉತ್ತರಿಸುತ್ತೇನೆ, ಇದು ಹಬ್ಬದ ಸಮಯ ಎಂದ ಸಿಎಂ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ರಾಜ್ಯಕ್ಕೆ ಭೇಟಿ ನೀಡಿದ್ದಾರೆ, ಇನ್ನೂ ನಾನಾ ವಿದ್ಯಮಾನಗಳು ನಡೆಯುತ್ತಿದ್ದು ಇವುಗಳ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದ್ದಾರೆ.

ಸಾಕಷ್ಟು ರಾಜಕೀಯ ವಿದ್ಯಮಾನಗಳು ನಡೆಯುತ್ತಿವೆ. ಎಲ್ಲವುಗಳಿಗೂ ಉತ್ತರ ನೀಡುತ್ತೇನೆ. ಅ.೬ರಂದು ಮತ್ತೆ ಮಾತನಾಡುತ್ತೇನೆ ಎಂದಿದ್ದಾರೆ. ಆರ್‌ಟಿ ನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಸಿಎಂ ಮಾತನಾಡಿದ್ದು, ಎಲ್ಲರಿಗೂ ದಸರಾ ಹಬ್ಬದ ಶುಭಾಷಯಗಳು. ತಾಯಿ ಚಾಮುಂಡೇಶ್ವರಿ ಆಶೀರ್ವಾದ ಎಲ್ಲರ ಮೇಲೂ ಇರಲಿ. ನಾಡಿನಲ್ಲಿ ಸುಖ, ಸುಭೀಕ್ಷೆ ಹಾಗೂ ನೆಮ್ಮದಿ ಸದಾ ನೆಲೆಸಿರಲಿ ಎಂದಿದ್ದಾರೆ. ನೆಮ್ಮದಿಯಿಂದ ಹಬ್ಬದ ಆಚರಣೆ ಮಾಡಿ, ರಾಜಕೀಯದ ಬಗ್ಗೆ ಮತ್ತೆ ಮಾತನಾಡೋಣ, ಅ.೬ರಂದು ಎಲ್ಲದಕ್ಕೂ ಉತ್ತರ ನೀಡುತ್ತೇನೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!