ಹೊಸದಿಗಂತ ಡಿಜಿಟಲ್ ಡೆಸ್ಕ್:
ನನ್ನ ಹಾಗೂ ಶ್ರೀರಾಮುಲು ಮಧ್ಯೆ ಯಾವುದೇ ಭಿನ್ನಾಭಿಪ್ರಾಯವೇ ಇಲ್ಲ. ಇಡೀ ಜಗತ್ತೇ ಬೇರೆ, ನಾನು ಶ್ರೀರಾಮುಲುನೇ ಬೇರೆ. ನಮ್ಮದು ರಾಜಕೀಯ ಮೀರಿದ ಸಹೋದರತ್ವ. ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ ಎಂದು ಮಾಜಿ ಸಚಿವ ಜನಾರ್ಧನ ರೆಡ್ಡಿ ಸ್ಪಷ್ಟ ಪಡಿಸಿದ್ದಾರೆ.
ಸಚಿವ ಶ್ರೀರಾಮುಲು ನಿವಾಸಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಿಬ್ಬರಲ್ಲಿ ಯಾವುದೇ ಭಿನ್ನಾಭಿಪ್ರಾಯ ಬಂದಿಲ್ಲ. ಆ ಪರಿಸ್ಥಿತಿಯೂ ನಿರ್ಮಾಣವಾಗಿಲ್ಲ ಎಂದರು.
ಸಚಿವ ಶ್ರೀರಾಮುಲು ಮನೆ ಅಂದ್ರೇ ಅದು ನನ್ನ ಮನೆ ಇದ್ದಂತೆ. ನನ್ನ ಮನೆ ಅಂದ್ರೇ ಅದು ಶ್ರೀರಾಮುಲು ಮನೆ ಇದ್ದಂತೆ ಎಂದು ಹೇಳಿದರು. ನಮ್ಮಿಬ್ಬರದ್ದೂ ರಾಜಕೀಯ ಮೀರಿದ ಸಂಬಂಧವಾಗಿದೆ. ರಾಜಕೀಯ ಮೀರಿದಂತ ಸಹೋದರತ್ವವಾಗಿದೆ. ಇದನ್ನು ಶ್ರೀರಾಮುಲು ಅವರೇ ಹೇಳಿದ್ದಾರೆ. ಹೀಗಾಗಿ ಮುನಿಸು ಇಲ್ಲ. ಯಾವುದೇ ಭಿನ್ನಾಭಿಪ್ರಾಯವೂ ಇಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದರು.