ನಾನು ಗೃಹ ಸಚಿವನಾದರೆ ಎಲ್ಲವನ್ನೂ ಸರಿ ಮಾಡುತ್ತೇನೆ: ಯತ್ನಾಳ್

ಹೊಸದಿಗಂತ ವರದಿ,ವಿಜಯಪುರ:

ನಾನು ಗೃಹ ಸಚಿವನಾದರೆ ಎಲ್ಲರಿಗೂ ಜನ್ನತ್ ತೋರಿಸುತ್ತೇನೆ, ಎಲ್ಲವನ್ನೂ ಸರಿ ಮಾಡುತ್ತೇನೆ. ಈ ದೇಶ ಯೋಗ್ಯವಿಲ್ಲ ಅಂದವರಿಗೆ ಜನ್ನತ್ ತೋರಿಸುತ್ತೇನೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿಕಾರಿದ್ದಾರೆ.

ಹಿಜಾಬ್ ಕುರಿತು ನಗರದಲ್ಲಿ ಪ್ರತಿಕ್ರಿಯಿಸಿ, ದೇಶ ವಿರೋಧಿಗಳು ಬೇಕಿದ್ದರೆ ಪಾಕಿಸ್ಥಾನಕ್ಕೆ ಹೋಗಲಿ, ಅವರ ಮುಂದೆ ಇರೋದು ಎರಡೇ ಆಯ್ಕೆ, ಒಂದು ಈ ನೆಲದ ರೂಲ್ಸ್ ಪಾಲನೆ ಮಾಡೋದು,
ಇನ್ನೊಂದು ಅವರ ಇಷ್ಟ ಬಂದ ಜಾಗ ಹುಡುಕಿಕೊಳ್ಳೊದು. ನಾನು ಒಳ್ಳೆಯ ಮುಸ್ಲಿಮ್’ರಿಗೆ ಈ ಮಾತು ಹೇಳುತ್ತಿಲ್ಲ ಎಂದರು.

50 ವರ್ಷಗಳಿಂದ ಕಾಂಗ್ರೆಸ್ ಇವರಿಗೆ ಸಾಕಷ್ಟು ಸೌಲಭ್ಯ ಕೊಟ್ಟಿದೆ. ಕೆಲವರು ಈ ಸೌಲಭ್ಯಗಳನ್ನ ದುರ್ಬಳಿಕೆ ಮಾಡಿಕೊಂಡಿದ್ದಾರೆ. ದೇಶದಲ್ಲಿ ಈಗ ಮೋದಿ ಸರ್ಕಾರ ಇದೆ, ಇನ್ಮೇಲೆ ಇದೆಲ್ಲ ನಡೆಯಲ್ಲ. ತ್ರಿಬಲ್ ತಲಾಖ್ ವಿಚಾರದಲ್ಲಿ ದಿಟ್ಟ ನಿರ್ಧಾರವನ್ನ ಮಾಡಿದ್ದೇವೆ, ಈಗ ಎಲ್ಲ ಶಾಲಾ-ಕಾಲೇಜುಗಳಲ್ಲೂ ಸಮವಸ್ತ್ರ ನೀತಿ ಪಾಲನೆಯಾಗಬೇಕು. ಹಿಜಾಬ್ ಧರಿಸಿದ್ದಕ್ಕೆ ಕೇಸರಿ ಶಾಲು ತಕ್ಕ ಪ್ರತಿಕ್ರಿಯೆ ನೀಡಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!