ಯುವತಿಯೊಂದಿಗೆ ಅನುಚಿತ ವರ್ತನೆ: ಮೊಬೈಲ್ ಕಸಿದು ಪರಾರಿ

ಹೊಸದಿಗಂತ ವರದಿ, ಮಡಿಕೇರಿ:

ಬಸ್‍ನಿಂದ ಇಳಿದು ಮನೆಗೆ ಏಕಾಂಗಿಯಾಗಿ ತೆರಳುತ್ತಿದ್ದ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿ ಎಳೆದಾಡಿ ಆಕೆಯ ಮೊಬೈಲ್ ಕಸಿದುಕೊಂಡು ಪರಾರಿಯಾದ ಘಟನೆ ನಡೆದಿದೆ.
7ನೇ ಹೊಸಕೋಟೆ ನಿವಾಸಿ ಕಬೀರ್ ಎಂಬಾತನೇ ಈ ಕೃತ್ಯ ಎಸಗಿದವನಾಗಿದ್ದಾನೆ.
ಕುಶಾಲನಗರದಿಂದ ಕರ್ತವ್ಯ ಮುಗಿಸಿ ಬಸ್’ನಲ್ಲಿ ಬಂದಿಳಿದು ಮನೆಗೆ ಒಂಟಿಯಾಗಿ ತೆರಳುತ್ತಿದ್ದ ಯುವತಿಯನ್ನು ಎಳೆದಾಡಿ ಅನುಚಿತವಾಗಿ ವರ್ತಿಸಿದ್ದಲ್ಲದೆ, ಆಕೆಯ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾನೆ.
ಹಿಂದೆಯೂ ಹಲವು ಮಹಿಳೆಯರ ಪ್ರಕರಣಗಳಲ್ಲಿ ಜೈಲು ವಾಸ ಅನುಭವಿಸಿದ್ದ ಈತ ,ಜಾಮೀನಿನ ಮೇಲೆ ಹೊರ ಬಂದಿದ್ದಾನೆ. ವಿಕೃತ ಮನೋಭಾವದ ಈತ ಮಹಿಳೆಯವರೊಂದಿಗೆ ಹಲವು ಬಾರಿ ಅನುಚಿತವಾಗಿ ವರ್ತಿಸಿದ್ದು ಅಲ್ಲದೆ ಕೆಲವು ಕ್ರಿಮಿನಲ್ ಪ್ರಕರಣದಲ್ಲೂ ಭಾಗಿಯಾಗಿ, ಮಾನಸಿಕ ಸ್ಥಿತಿ ಕಳೆದುಕೊಂಡವನಂತೆ ವರ್ತಿಸುತ್ತಿದ್ದಾನೆನ್ನಲಾಗಿದೆ.
ಈ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದು ಸುಂಟಿಕೊಪ್ಪದಲ್ಲಿ ಡಿವೈಎಸ್‍ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಆರೋಪಿ ನಾಪತ್ತೆಯಾಗಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!