ನಾಲ್ಕರ ಬಳಿಕ ಈಗ ಆಗುಂಬೆ ಘಾಟಿಯ ಮೂರನೇ ತಿರುವಲ್ಲಿ ಬಿರುಕು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಾಲ್ಕನೇ ತಿರುವಿನಲ್ಲಿ ಭೂಕುಸಿತ ಕಾಣಿಸಿಕೊಂಡಿದ್ದ ಆಗುಂಬೆ ಘಾಟಿಯಲ್ಲಿ ಈಗ ಮೂರನೇ ತಿರುವಿನ ರಸ್ತೆಯಲ್ಲಿ ಬಿರುಕು ಕಂಡಿದ್ದು ಮತ್ತಷ್ಟು ಆತಂಕ ಹೆಚ್ಚಿಸಿದೆ.

ಈ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭೂಕುಸಿತಗಳೂ ಹೆಚ್ಚುತ್ತಿದ್ದು, ತಿರುವಿನಲ್ಲಿ ಕಾಣಿಸಿಕೊಂಡಿರುವ ಬಿರುಕು ಅಪಾಯದ ಕರೆಗಂಟೆಯಂತೆ ಭಾಸವಾಗಿದೆ.

ಮಳೆನೀರು ಈ ಭಾಗದ ತಿರುವುಗಳ ತಡೆಗೋಡೆಯ ಬದಿ ರಭಸವಾಗಿ ಹರಿಯುತ್ತಿರುವುದೂ ಬಿರುಕು ಕಾಣಿಸಿಕೊಳ್ಳಲು ಕಾರಣ ಎಂದು ಅಂದಾಜಿಸಲಾಗಿದೆ. ಈಗಾಗಲೇ ಈ ದಾರಿಯಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!