ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಕ್ವಾಡ್( Quad)ನ ಚಾಲನಾ ಶಕ್ತಿಯಾಗಿದೆ ಎಂದು ಶ್ವೇತಭವನ ಹೇಳಿದೆ. ಕ್ವಾಡ್ ಗುಂಪಿನ ಭಾಗವಾಗಿರುವ ದೇಶಗಳ ವಿದೇಶಾಂಗ ಸಚಿವರು ಮೆಲ್ಬರ್ನ್ನಲ್ಲಿ ಭೇಟಿಯಾದ ನಂತರ ಶ್ವೇತಭವನ ಈ ಹೇಳಿಕೆ ನೀಡಿದೆ.
ಕ್ವಾಡ್ ಭದ್ರತಾ ಸಂವಾದವು ಭಾರತ, ಯುಎಸ್, ಜಪಾನ್ ಹಾಗೂ ಆಸ್ಟ್ರೇಲಿಯಾವನ್ನು ಒಳಗೊಂಡಿದೆ.
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹಾಗೂ ಯುಎಸ್ ವಿದೇಶಾಂಗ ಕಾರ್ಯದರ್ಶಿ ಟೋನಿ ಬ್ಲಿಂಕನ್ ಚರ್ಚೆಯ ಭಾಗವಾಗಿದ್ದರು. ಭಾರತವು ದಕ್ಷಿಣ ಏಷ್ಯಾ ಮತ್ತು ಹಿಂದೂ ಮಹಾಸಾಗರದಲ್ಲಿ ಸಮಾನ ಮನಸ್ಕ ಪಾಲುದಾರ ಮತ್ತು ನಾಯಕ ಎಂದು ನಾವು ಗುರುತಿಸುತ್ತೇವೆ . ಆಗ್ನೇಯ ಏಷ್ಯಾದಲ್ಲಿ ಸಕ್ರಿಯ ಮತ್ತು ಸಂಪರ್ಕ ಹೊಂದಿದ್ದು, ಇದು ಕ್ವಾಡ್ನ ಚಾಲನಾ ಶಕ್ತಿ ಮತ್ತು ಪ್ರಾದೇಶಿಕ ಬೆಳವಣಿಗೆ ಮತ್ತು ಅಭಿವೃದ್ಧಿಯ ಎಂಜಿನ್ ಆಗಿದೆ ಎಂದು ಶ್ವೇತಭವನದ ಮುಖ್ಯ ಉಪಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್- ಪಿಯರ್ ಹೇಳಿದ್ದಾರೆ.