ರಾಜನಾಥ್‌ ಸಿಂಗ್‌ಗೆ ವಿಭಿನ್ನ ಉಡುಗೊರೆ: ಬಿಳಿ ಕುದುರೆ ಗಿಫ್ಟ್‌ ಮಾಡಿದ ಮಂಗೋಲಿಯಾ ಅಧ್ಯಕ್ಷ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗೋಲಿಯಾ ಪ್ರವಾಸದಲ್ಲಿದ್ದಾರೆ. ಮಂಗೋಲಿಯಾಕ್ಕೆ ಭೇಟಿ ನೀಡಿದ ಭಾರತದ ಮೊದಲ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಂಬುದು ಗಮನಾರ್ಹ. ಮಂಗೋಲಿಯಾ ಪ್ರವಾಸದಲ್ಲಿರುವ ಸಚಿವ ರಾಜನಾಥ್ ಸಿಂಗ್ ಅವರಿಗೆ ಅಲ್ಲಿನ ಅಧ್ಯಕ್ಷ ಉಖ್ನಾಗಿನ್ ಕುರೆಲ್ಸುಕ್ ಅವರು ಬಿಳಿ ಕುದುರೆಯೊಂದನ್ನು ಉಡುಗೊರೆಯಾಗಿ ನೀಡಿದರು. ಕುರೆಲ್‌ಸುಕ್‌ ತನಗೆ ಕುದುರೆಯೊಂದನ್ನು ಉಡುಗೊರೆಯಾಗಿ ನೀಡಿದ್ದಾಗಿ ರಾಜನಾಥ್‌ ಸಿಂಗ್‌ ತಮ್ಮ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಮಂಗೋಲಿಯಾದ ಸ್ನೇಹಿತರಿಂದ ವಿಶೇಷ ಉಡುಗೊರೆ ಬಂದಿದೆ ಎಂದು ಸಚಿವರು ಬರೆದುಕೊಂಡಿದ್ದಾರೆ. ಕುದುರೆಗೆ ತೇಜಸ್ ಎಂದು ಹೆಸರಿಟ್ಟಿದ್ದು, ಅಧ್ಯಕ್ಷ ಕುರೆಲ್ಸುಕ್ಗೆ ಧನ್ಯವಾದ ತಿಳಿಸಿದರು. ಭೇಟಿಯ ಸಂದರ್ಭದಲ್ಲಿ, ಮಂಗೋಲಿಯಾ ಅಧ್ಯಕ್ಷರೊಂದಿಗೆ ಕಾರ್ಯತಂತ್ರದ ಸಂಬಂಧಗಳನ್ನು ಚರ್ಚಿಸಲಾಯಿತು. ಭಾರತದ ರಕ್ಷಣಾ ಸಚಿವರೊಬ್ಬರು ಪೂರ್ವ ಏಷ್ಯಾ ದೇಶಕ್ಕೆ ಭೇಟಿ ನೀಡಿರುವುದು ಇದೇ ಮೊದಲು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!