ಪಾಕಿಸ್ತಾನದ ರಕ್ತ ಹರಿಸದೆ, ಕದನ ವಿರಾಮಕ್ಕೆ ಭಾರತ ಸರ್ಕಾರದ ಸಮ್ಮತಿ ಒಪ್ಪಲ್ಲ: ಮುತಾಲಿಕ್

ಹೊಸದಿಗಂತ ಧಾರವಾಡ:

ಪಾಕಿಸ್ತಾನದ ರಕ್ತ ಹರಿಸದೆ, ಕದನ ವಿರಾಮಕ್ಕೆ ಸಮ್ಮತಿ ನೀಡಿದ ಭಾರತ ಸರ್ಕಾರದ ನಿರ್ಧಾರ ಒಪ್ಪುವುದಿಲ್ಲ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ಸರ್ಕಾರ ಪಾಪಿ ಪಾಕಿಸ್ತಾನದ ರಕ್ತ ಹರಿಸಿ ತಕ್ಕ ಉತ್ತರ ನೀಡುತ್ತದೆ ಎಂದು ನಂಬಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ನಾವಿಟ್ಟ ವಿಶ್ವಾಸ ಹುಸಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಏಕಾಏಕಿ ಕದನ ವಿರಾಮ ಬಹಳ ನೋವು ತಂದಿದೆ. ಭಾರತ ಸರ್ಕಾರ ಈ ನಿರ್ಧಾರ ಕೈಬಿಟ್ಟು, ಭಾರತದ ಅಮಾಯಕರ ರಕ್ತ ಹರಿಸಿರುವ ಪಾಕಿಸ್ತಾನ ನಿರ್ನಾಮ ಮಾಡುವ ಮೂಲಕ ಮೃತರ ಆತ್ಮಕ್ಕೆ ಶಾಂತಿ ನೀಡುವ ಕೆಲಸ ಮಾಡಬೇಕು ಎಂದು ಆಗ್ರಹ ಮಾಡಿದರು.

ಡೋನಾಲ್ಡ್ ಟ್ರಂಪ್ ಯಾರು? ನಮ್ಮ ನೋವು ಅವನಿಗೆ ಏನು? ಗೊತ್ತು. ಭಾರತದ ಪ್ರತೀಕಾರಕ್ಕೆ ಮಧ್ಯಸ್ಥಿಕೆ‌ವಹಿಸುವ ದೊಡ್ಡಸ್ಥಿಕೆ ಮಾಡುವ ಅವಶ್ಯಕತೆ ಏನಿತ್ತು? ಎಂದು ಪ್ರಶ್ನಿಸಿದ ಮುತಾಲಿಕ್, ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಮನ್ನಣೆ ನೀಡಬಾರದು ಎಂದು ಒತ್ತಾಯಿಸಿದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!