ಹೊಸ ದಿಗಂತ ವರದಿ, ಮೈಸೂರು:
ಹಿಂದೂ ದೇವರುಗಳನ್ನು ನಿಂದಿಸಿ, ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವoತೆ ವ್ಯಕ್ತಿಯೊಬ್ಬರನ್ನು ಒತ್ತಾಯಿಸಿದ ಮಹಿಳೆಯೊಬ್ಬರ ವಿರುದ್ಧ ನಗರದ ಹೆಬ್ಬಾಳು ಠಾಣೆಯ ಪೊಲೀಸರು ಎಫ್ಐ ಆರ್ ದಾಖಲಿಸಿದ್ದಾರೆ.
ಕಮಲಮ್ಮ ಎಂಬುವರೇ ಹಿಂದು ದೇವರುಗಳನ್ನು ನಿಂದಿಸಿ, ಶ್ರೀಧರ್ ಎಂಬುವರನ್ನು ಮತಾಂತರವಾಗುವoತೆ ಒತ್ತಾಯಿಸಿದ ಆರೋಪ ಎದುರಿಸುತ್ತಿದ್ದಾರೆ.
ಶ್ರೀಧರ್ ಮೈಸೂರಿನ ಹೆಬ್ಬಾಳಿನ ಸಿಐಟಿಬಿ ಛತ್ರದ ರಸ್ತೆಯ ಬಸ್ ನಿಲ್ದಾಣದಲ್ಲಿ ನಿಂತಿರುವಾಗ ಅಲ್ಲಿಗೆ ಬಂದ ಕಮಲಮ್ಮ ಮಾತನಾಡಿಸಿ, ಕ್ರಿಶ್ಚಿಯನ್ ಧರ್ಮವೇ ಮೇಲು ಎಂದು ಹೇಳಿ ಹಿಂದೂ ಧರ್ಮ ಹಾಗೂ ಹಿಂದೂ ದೇವರುಗಳನ್ನು ಹೀಯಾಳಿಸಿದರಲ್ಲದೆ, ನೀನು ಯೇಸುವನ್ನು ಪೂಜಿಸಬೇಕು. ಬೇರೆ ಯಾವುದೇ ದೇವರುಗಳನ್ನು ಪೂಜಿಸಬಾರದು. ಹಿಂದೂ ದೇವರನ್ನು ಪೂಜಿಸಿದರೆ ನರಕಕ್ಕೆ ಹೋಗಬೇಕಾಗುತ್ತದೆ ಎಂದು ಹೇಳಿದರಲ್ಲದೆ, ನೀನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾದರೆ ನಿನಗೆ ಬೇಕಾದಷ್ಟು ಹಣವನ್ನು ನೀಡುತ್ತೇವೆ. ನಿನಗೆ ಹಾಗೂ ನಿಮ್ಮ ಕುಟುಂಬದವರಿಗೆ ಉಚಿತವಾಗಿ ವೈದ್ಯಕೀಯ ಸೌಲಭ್ಯ ಮತ್ತಿತರಗಳನ್ನು ನೀಡುತ್ತೇವೆ. ಹಾಗಾಗಿ ನೀನು ಮತಾಂತರವಾಗು ಎಂದು ಒತ್ತಾಯಿಸಿದ್ದಾರೆ. ಇದಕ್ಕೆ ಶ್ರೀಧರ್ ಒಪ್ಪದೆ, ಮತಾಂತರವಾಗಲು ನಿರಾಕರಿಸಿದಾಗ, ಕಮಲಮ್ಮ ಅವಾಚ್ಯ ಶಬ್ದಗಳಿಂದ ನಿಂದಿಸಿ, ನೀನು ಮತಾಂತರವಾಗದಿದ್ದರೆ ಮುಂದಿನ ದಿನಗಳಲ್ಲಿ ಯೇಸು ನಿನ್ನನ್ನು ಹಾಗೂ ನಿಮ್ಮ ಕುಟುಂಬವನ್ನು ನಾಶ ಮಾಡುತ್ತಾನೆ. ನಿಮ್ಮ ಕುಟುಂಬ ಉಳಿಯುವುದಿಲ್ಲ ಎಂದು ಬೆದರಿಕೆ ಹಾಕಿದ್ದಾಳೆ.
ಇದರಿಂದ ಬೇಸರಗೊಂಡ ಶ್ರೀಧರ್ ಅವರು ಹೆಬ್ಬಾಳ ಪೊಲೀಸ್ ಠಾಣೆಗೆ ತೆರಳಿ, ಆರೋಪಿಯ ವಿರುದ್ಧ ದೂರು ನೀಡಿದ್ದಾರೆ. ಪೊಲೀಸರು ಆರೋಪಿಯ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡು, ಕ್ರಮ ಜರುಗಿಸುತ್ತಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಪಾದ್ರಿಯೊಬ್ಬರು ಠಾಣೆಗೆ ಆಗಮಿಸಿ ರಾಜಿ ಸಂಧಾನ ನಡೆಸುವ ಪ್ರಯತ್ನ ನಡೆಸಿದರು.