ಗ್ಯಾರಂಟಿ ಹಣಕ್ಕಾಗಿ ಕರ್ನಾಟಕವನ್ನು ‘ಕುಡುಕರ ನಾಡು’ ಮಾಡುತ್ತಿದೆಯೇ ಸರ್ಕಾರ? ವಿಜಯೇಂದ್ರ ಪ್ರಶ್ನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಅಸ್ತ್ರ ಪ್ರಯೋಗಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಬೃಹತ್ ಹಗರಣದ ನೈತಿಕ ಹೊಣೆ ಹೊತ್ತು ಸಚಿವ ತಿಮ್ಮಾಪುರ ಅವರು ತಕ್ಷಣ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸರ್ಕಾರವು ಅಬಕಾರಿ ಇಲಾಖೆಗೆ ದುಬಾರಿ ಗುರಿ ನೀಡಿದೆ. ಇದರಿಂದಾಗಿ ಪ್ರತಿ 500 ಮೀಟರ್‌ಗೆ ಒಂದು ಮದ್ಯದಂಗಡಿ ತೆರೆಯುವಂತಾಗಿದ್ದು, ಕರ್ನಾಟಕವನ್ನು ‘ಕುಡುಕರ ರಾಜ್ಯ’ವನ್ನಾಗಿ ಪರಿವರ್ತಿಸಲಾಗುತ್ತಿದೆ ಎಂದು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು. … Continue reading ಗ್ಯಾರಂಟಿ ಹಣಕ್ಕಾಗಿ ಕರ್ನಾಟಕವನ್ನು ‘ಕುಡುಕರ ನಾಡು’ ಮಾಡುತ್ತಿದೆಯೇ ಸರ್ಕಾರ? ವಿಜಯೇಂದ್ರ ಪ್ರಶ್ನೆ