ಹೊಸ ದಿಗಂತ ವರದಿ, ಹುಬ್ಬಳ್ಳಿ:
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹಾಗೂ ಶಾಸಕ ಲಕ್ಷ್ಮಣ ಸವದಿಗೆ ಅವರಿಗೆ ಸಚಿವ ಸ್ಥಾನ ನೀಡಬೇಕಿತ್ತು. ಅವರನ್ನು ಕಡೆಗಣಿಸಿದ್ದು ಸರಿಯಲ್ಲ ಎಂದು ಮೂರು ಸಾವಿರಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅವರಿಬ್ಬರು ಅನುಭವಿ ಸಜ್ಜನ, ಸಾತ್ವಿಕ ರಾಜಕಾರಣಿಗಳಾಗಿದ್ದಾರೆ. ಅದರ ಆಧಾರ ಮೇಲಾದರು ನೀಡಬೇಕಿತ್ತು. ಮುಂದಾದರೂ ಅವರನ್ನು ಕಡೆಗಣಿಸದೆ ಸಚಿವ ಸ್ಥಾನ ಕೊಡಬೇಕು ನೀಡವುದು ಕಾಂಗ್ರೆಸ್ ಧರ್ಮವಾಗಿದೆ. ಅವರಿಬ್ಬರ ಅನುಭವ ಪಕ್ಷ ಬಳಸಿಕೊಳ್ಳಬೇಕು ಎಂದರು.
ಕಾಂಗ್ರೆಸ್ ಲಿಂಗಾಯತರನ್ನು ಕಡೆಗಣಿಸಿದ ಹಾಗೇ ಕಾಣಲ್ಲ. ಇನ್ನು ಅವಕಾಶ ಇದೆ, ಶೆಟ್ಟರ್ ಹಾಗೂ ಸವದಿಗೆ ಅವಕಾಶ ಮಾಡಿಕೊಡೋದು ಪಕ್ಷಕ್ಕೆ ಒಳ್ಳೆಯದು ಎಂದು ತಿಳಿಸಿದರು.
ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿ ಭರವಸೆ ಸರ್ಕಾರ ಜಾರಿ ಮಾಡುತ್ತದೆ. ಅದಕ್ಕೆ ಅದರದೇ ಆದ ನೀತಿ ಇರುತ್ತದೆ. ಅದರನ್ವಯ ಜಾರಿ ಮಾಡುತ್ತದೆ. ಜಾರಿಗೆ ತರದೆ ಇರೋಕೆ ಸಾಧ್ಯ ಇಲ್ಲ ಎಂದು ಹೇಳಿದರು.