ಹೊಸದಿಗಂತ ಡಿಜಿಟಲ್ ಡೆಸ್ಕ್
ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಭಯೋತ್ಪಾದಕ ಮತ್ತು ಆತನ ಸಹಚರನನ್ನು ಬಂಧಿಸುವ ಮೂಲಕ ಭದ್ರತಾ ಪಡೆಗಳು ಭಯೋತ್ಪಾದನಾ ಜಾಲವನ್ನು ಯಶಸ್ವಿಯಾಗಿ ಭೇದಿಸಿವೆ.
ಬಾರಾಮುಲ್ಲಾದ ಚೆರದಾರಿ ಹಿಲ್ಟಾಪ್ ಬಳಿ ವಾಹನ ಚೆಕ್ ಪೋಸ್ಟ್ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಗಳನ್ನು ಭಾರತೀಯ ಸೇನೆ ಹಾಗೂ ಕಾಶ್ಮೀರ ಪೊಲೀಸರ ಜಂಟಿ ತಂಡ ಬಂಧಿಸಿದೆ.
ಬಂಧಿತರು ಬಾರಾಮುಲ್ಲಾ ಜಿಲ್ಲೆಯ ಆಶಿಕ್ ಹೊಸೈನ್ ಲೋನ್ ಹಾಗೂ ಕಾಂತಬಾಗ್ ನ ಉಝೈರ್ ಅಮೀನ್ ಗನಿ ಎಂದು ಗುರುತಿಸಲಾಗಿದೆ.
ಭದ್ರತಾ ಪಡೆಗಳನ್ನು ನೋಡಿದ ನಂತರ ಇಬ್ಬರೂ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದರು. ಈ ವೇಳೆ ಯೋಧರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತರಿಂದ ಒಂದು ಪಿಸ್ತೂಲ್, ಮ್ಯಾಗಜೀನ್, 9 ಎಂಎಂ ಪಿಸ್ತೂಲ್ನ 8 ಸುತ್ತು ಗುಂಡುಗಳು,36 ಗ್ರೆನೇಡ್ ಹಾಗೂ 2 ಯುಬಿಜಿಎಲ್ ಗ್ರೆನೇಡ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ