January16, 2026
Friday, January 16, 2026
spot_img

ತೋಟದ ಕಚ್ಚಾ ರಸ್ತೆಯಲ್ಲಿ ಮಗುಚಿದ ಜೀಪ್; ಕಾಫಿ ಬೆಳೆಗಾರ ಸ್ಥಳದಲ್ಲೇ ಸಾವು

ಹೊಸದಿಗಂತ ಸೋಮವಾರಪೇಟೆ:

ತೋಟದಲ್ಲಿ ಕಷ್ಟಪಟ್ಟು ಬೆಳೆದ ಫಸಲನ್ನು ಮನೆಗೆ ತರುವ ಸಂಭ್ರಮದಲ್ಲಿದ್ದ ಬೆಳೆಗಾರನೊಬ್ಬ, ಜೀಪ್ ಪಲ್ಟಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಸಮೀಪದ ಚಿಕ್ಕತೋಳೂರು ಗ್ರಾಮದಲ್ಲಿ ಸಂಭವಿಸಿದೆ.

ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತೋಳೂರು ನಿವಾಸಿ, ಕೇಳಗನಮನೆ ಪರಮೇಶ್ (54) ಮೃತಪಟ್ಟ ದುರ್ದೈವಿ.

ಘಟನೆಯ ವಿವರ:

ಪರಮೇಶ್ ಅವರು ಸೋಮವಾರ ತಮ್ಮ ತೋಟದಲ್ಲಿ ಕಾಫಿ ಕೊಯ್ಲು ಮುಗಿಸಿ, ಹಣ್ಣುಗಳನ್ನು ಚೀಲಗಳಲ್ಲಿ ತುಂಬಿಸಿಕೊಂಡು ಸ್ವಂತ ಜೀಪ್‌ನಲ್ಲಿ ಮನೆಗೆ ಮರಳುತ್ತಿದ್ದರು. ತೋಟದೊಳಗಿನ ಕಚ್ಚಾ ರಸ್ತೆಯಲ್ಲಿ ಚಲಿಸುತ್ತಿದ್ದಾಗ, ಆಕಸ್ಮಿಕವಾಗಿ ಜೀಪ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ವಾಹನದ ಅಡಿಯಲ್ಲಿ ಸಿಲುಕಿದ ಪರಮೇಶ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ತೋಟದ ಫಸಲು ಮನೆಗೆ ಸೇರುವ ಮೊದಲೇ ಯಜಮಾನ ಸಾವನ್ನಪ್ಪಿರುವುದು ಶೋಕದ ಛಾಯೆ ಮೂಡಿಸಿದೆ.

Must Read

error: Content is protected !!