ದಿಗಂತ ವರದಿ ಉಪ್ಪಿನಂಗಡಿ:
ಇಲ್ಲಿನ ರಥಬೀದಿ ನಿವಾಸಿ ಹಿರಿಯ ಪತ್ರಕರ್ತ ಬಿ ಟಿ ರಂಜನ್ ಶೆಣೈ (60) ಶನಿವಾರ ನಸುಕಿನ ವೇಳೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ನಡೆದಾಡುವ ಜ್ಜ್ಞಾನ ಕೋಶವೆಂದೆ ಹೆಗ್ಗಳಿಕೆ ಪಡೆದಿದ್ದ ಇವರು ಹೊಸದಿಗಂತ ಮುಂಗಾರು ಉದಯವಾಣಿ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಪ್ರಸಕ್ತ ಹೊಸದಿಗಂತ ಪತ್ರಿಕೆ ಯ ಪುತ್ತೂರು ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರ ಗಳಿಗೆ ಭಾಜನರಾಗಿದ್ದರು.
ಅವರು ಪತ್ನಿ ಪುತ್ರಿಯನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಹೊಸದಿಗಂತ ಬಳಗ ಗಾಢ ಸಂತಾಪ ವ್ಯಕ್ತಪಡಿಸುತ್ತದೆ…