ಕಂಬಳ ಕರೆ ಬಿಟ್ಟು ಗದ್ದೆಯಲ್ಲಿ ಉಳುಮೆಗೆ ಸಾಥ್ ನೀಡಿದ ಕೋಣಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಂಟ್ವಾಳ ತಾಲೂಕಿನ ನಾವೂರು ದೇವಶ್ಯಪಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನೂರ್ತಡಿಯಲ್ಲಿ ಕಂಬಳದ ಕೋಣಗಳ ಮುಖೇನ ಗದ್ದೆಗಳ ಉಳುಮೆ ಕಾರ್ಯ ಎಲ್ಲರ ಗಮನಸೆಳೆದಿದೆ.
ಸುಮಾರು ೪ ಎಕರೆ ಜಮೀನಿನಲ್ಲಿ ಇಲ್ಲಿಯ ಸ್ಥಳೀಯ ಯುವಕರು ಹಾಗೂ ಸ್ಥಳೀಯರು ಸೇರಿ ಪಳಗಿದ ಕಂಬಳ ಕೋಣಗಳ ಮೂಲಕ ಮಾಡಿ ನಾಟಿ ಕಾರ್ಯ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಕಂಬಳ ಕೋಣದ ಮಾಲಕ ಗಣೇಶ್ ಮಾಂಗಜೆ ಅವರ ತಂಡವು ಕೋಣಗಳಿಗೆ ತರಬೇತಿಯನ್ನು ನೀಡಿ ಉಳುಮೆ ಕಾರ್ಯ ಕೈಗೆತ್ತಿಕೊಂಡರು. ಆಧುನಿಕ ಯುಗದಲ್ಲಿ ಕೃಷಿಯನ್ನು ಯಂತ್ರಗಳ ಮೂಲಕ ಹೆಚ್ಚಾಗಿ ಮಾಡುತ್ತಿದ್ದರೂ, ಮುಂದಿನ
ಜನಾಂಗಕ್ಕೆ ಕೃಷಿಯ ಅರಿವು ಮೂಡಲಿ ಎಂದು ಸಾಂಪ್ರದಾಯಿಕ ಶೈಲಿಯಲ್ಲಿ ಉಳುಮೆ ಮಾಡಿದ್ದು ವಿಶೇಷವಾಗಿದೆ.
ಕರಾವಳಿ ಭಾಗದಲ್ಲಿ ಮಳೆ ತೀವ್ರತೆ ಕಳೆದುಕೊಳ್ಳುತ್ತಿರುವಂತೆಯೇ ಕೃಷಿ ಚಟುವಟಿಕೆಗಳು ಚುರುಕಾಗುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!