ಕನ್ಹಯ್ಯಾ ಲಾಲ್ ಶಿರಶ್ಚೇದನ: ಇದು ದೇಶ ತಲೆತಗ್ಗಿಸುವ ಕೃತ್ಯ ಎಂದ ಸಿದ್ದಲಿಂಗ ಸ್ವಾಮೀಜಿ

ಹೊಸದಿಗಂತ ವರದಿ ಕಲಬುರಗಿ: 

ರಾಜಸ್ಥಾನದ ಉದಯಪುರದಲ್ಲಿ ಹಿಂದೂ ವ್ಯಕ್ತಿಯ (ಟೇಲರ್) ಕನ್ಹಯ್ಯಾ ಎಂಬುವವರ ಶೀರಚ್ಛೇದ ಮಾಡಿದ್ದು, ಇಡೀ ದೇಶಕ್ಕೆ ತಲೆ ತಗ್ಗಿಸುವಂತಹ ವಿಚಾರವಾಗಿದೆ ಎಂದು ಶ್ರೀ ರಾಮ ಸೇನೆಯ ರಾಜ್ಯ ಗೌರವಾಧ್ಯಕ್ಷ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದ್ದಾರೆ. ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ಹಯ್ಯಾ ಲಾಲ್ ಅವರ ಅಂಗಡಿಗೆ ನುಗ್ಗಿ ಹಾಡುಹಗಲೇ ಕೊಲೆ ಮಾಡಿರುವ ಆರೀಪೊಗಳನ್ನು  ಗುಂಡಿಟ್ಟು ಕೊಲೆ ಮಾಡಬೇಕು ಎಂದರು.

ಮೊಹಮ್ಮದ್ ರಿಯಾಜ್ ಮತ್ತು ಅನ್ಸಾರಿ ಹಿಂದೂ ವ್ಯಕ್ತಿಯ ಕೊಲೆ ಮಾಡಿದ್ದಲ್ಲದೇ, ವಿಡಿಯೋ ಮಾಡುವುದರ ಮೂಲಕ ವಿಕೃತಿ ಮೆರೆದಿದ್ದಾರೆ. ಅಲ್ಲದೇ, ಹತ್ಯೆಯ ನಂತರ ವಿಡಿಯೋ ಮಾಡಿ ರಸಲುಲ್ಲಾ ಜಾಯೆಂಗೆ ಆಪ್ ಕೆ ಲಿಯೇ ಔರ್ ಮಾರೆಂಗೆ ಆಪ್ ಕೆ ಲಿಯೇ ಎಂದು ವಿಡಿಯೋ ಮಾಡಿ ಹರಿ ಬಿಟ್ಟಿದ್ದಾರೆ ಎಂದು ಕಿಡಿಕಾರಿದರು.

ಹತ್ಯೆಯ ನಂತರ ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೂಡಾ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿರುವುದು, ತೀವ್ರ ಖಂಡಿನೀಯವಾಗಿದೆ. ಕೊಲೆಗಡುಕರು ಐಸಿಸ್‌ನ ಎಜೆಂಟಾಗಿದ್ದು, ಇವರನ್ನು ಬಂಧನ ಮಾಡಿ ಜೈಲಿಗೆ ಹಾಕಿ ಪೋಷಿಸುವ ಬದಲು ಕಂಡಲ್ಲಿ ಗುಂಡಿಟ್ಟು ಹತ್ಯೆ ಮಾಡಬೇಕೆಂದು ಆಗ್ರಹಿಸಿದರು.

ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಅಲ್ಲಿ ಕಾಂಗ್ರೆಸ್ ಪಕ್ಷ ಮುಸ್ಲಿಂರ ತುಷ್ಠಿಕರಣ ಮಾಡುತ್ತಿದೆ. ಮುಸ್ಲಿಂ ತುಷ್ಠಿಕರಣ ಮಾಡಿದ್ದಕ್ಕೆ, ಇಂತಹ ಘಟನೆ ಜರುಗಿದೆ ಎಂದರು. ಘಟನೆ ಮರುಕಳಿಸದಂತೆ ಕೇಂದ್ರ ಸರ್ಕಾರವು,ಅಲ್ಲಿಯ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕು ಎಂದರು. ಈ ಘಟನೆಯಿಂದ ದೇಶದಲ್ಲಿ ಬಹುಸಂಖ್ಯಾತ ಹಿಂದುಗಳು ಸುರಕ್ಷಿತ ಇಲ್ಲ. ಅದಕ್ಕೆ ರಾಜಸ್ಥಾನದ ಹಿಂದೂ ವ್ಯಕ್ತಿಯ ಕೊಲೆಯೆ ಸಾಕ್ಷಿ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!