#ಅಮೃತಭಾರತಿಗೆಕನ್ನಡದಾರತಿ – ಕರ್ನಾಟಕದ ಸ್ವಾತಂತ್ರ್ಯ ಸೇನಾನಿಗಳನ್ನು ಹೆಕ್ಕಿ ಪರಿಚಯಿಸಿದ ಟ್ರೆಂಡ್

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ದೇಶವು ಸ್ವಾತಂತ್ರ್ಯದ ಅಮೃತಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಕರ್ನಾಟಕದ ಸ್ವಾತಂತ್ರ್ಯ ಸೇನಾನಿಗಳನ್ನು ಪರಿಚಯಿಸುವ ಟ್ವೀಟ್ ಸುರಿಮಳೆ ಶುಕ್ರವಾರ ಗಮನಸೆಳೆಯಿತು. ಕನ್ನಡ ನೆಲದಲ್ಲಿದ್ದು ಸ್ವಾತಂತ್ರ್ಯದ ಮಹತ್ತರ ಕನಸಿಗೆ ಹೋರಾಡಿದ, ಅಷ್ಟೇನೂ ಜನಪ್ರಿಯವಲ್ಲದ ವ್ಯಕ್ತಿತ್ವಗಳನ್ನು ಚುರುಕಾಗಿ ಪರಿಚಯಿಸಿದ್ದು ಈ ಹ್ಯಾಶ್ಟಾಗ್ ವಿಶೇಷ.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ನಾಡಿನ 75 ಸ್ವಾತಂತ್ರ್ಯ ಹೋರಾಟ ನಡೆದ ಸ್ಥಳಗಳಲ್ಲಿ ದೇಶಭಕ್ತಿಯನ್ನು ಬಗೆಬಗೆಯಲ್ಲಿ ಉಕ್ಕಿಸಬಲ್ಲ ‘ಅಮೃತ ಭಾರತಿಗೆ ಕನ್ನಡದಾರತಿ’ ಕಾರ್ಯಕ್ರಮವು ಶನಿವಾರ ಅನಾವರಣಗೊಳ್ಳಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ಕರ್ನಾಟಕ ಸರ್ಕಾರದ ಪ್ರಮುಖರು ಸೇರಿದಂತೆ ಹಲವರು ಈ ಟ್ವಿಟ್ಟರ್ ಹ್ಯಾಶ್ಟಾಗ್ ಅಡಿ ಆಸಕ್ತಿಕರ ಮಾಹಿತಿ ಹಂಚಿಕೊಂಡರು.

 

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!