ಹೊಸ ದಿಗಂತ ಡಿಜಿಟಲ್ ಡೆಸ್ಕ್
ದೇಶವು ಸ್ವಾತಂತ್ರ್ಯದ ಅಮೃತಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಕರ್ನಾಟಕದ ಸ್ವಾತಂತ್ರ್ಯ ಸೇನಾನಿಗಳನ್ನು ಪರಿಚಯಿಸುವ ಟ್ವೀಟ್ ಸುರಿಮಳೆ ಶುಕ್ರವಾರ ಗಮನಸೆಳೆಯಿತು. ಕನ್ನಡ ನೆಲದಲ್ಲಿದ್ದು ಸ್ವಾತಂತ್ರ್ಯದ ಮಹತ್ತರ ಕನಸಿಗೆ ಹೋರಾಡಿದ, ಅಷ್ಟೇನೂ ಜನಪ್ರಿಯವಲ್ಲದ ವ್ಯಕ್ತಿತ್ವಗಳನ್ನು ಚುರುಕಾಗಿ ಪರಿಚಯಿಸಿದ್ದು ಈ ಹ್ಯಾಶ್ಟಾಗ್ ವಿಶೇಷ.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ನಾಡಿನ 75 ಸ್ವಾತಂತ್ರ್ಯ ಹೋರಾಟ ನಡೆದ ಸ್ಥಳಗಳಲ್ಲಿ ದೇಶಭಕ್ತಿಯನ್ನು ಬಗೆಬಗೆಯಲ್ಲಿ ಉಕ್ಕಿಸಬಲ್ಲ ‘ಅಮೃತ ಭಾರತಿಗೆ ಕನ್ನಡದಾರತಿ’ ಕಾರ್ಯಕ್ರಮವು ಶನಿವಾರ ಅನಾವರಣಗೊಳ್ಳಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ಕರ್ನಾಟಕ ಸರ್ಕಾರದ ಪ್ರಮುಖರು ಸೇರಿದಂತೆ ಹಲವರು ಈ ಟ್ವಿಟ್ಟರ್ ಹ್ಯಾಶ್ಟಾಗ್ ಅಡಿ ಆಸಕ್ತಿಕರ ಮಾಹಿತಿ ಹಂಚಿಕೊಂಡರು.
ಸ್ವಾತಂತ್ರ್ಯ ಹೋರಾಟವೆಂಬುದೇ ರೋಚಕವಾದದ್ದು.ಅಂದಿನ ಘಟನೆಗಳನ್ನು ಓದುತ್ತಿದ್ದರೆ ನಮಗೆ ರೋಮಾಂಚನವಾಗುತ್ತದೆ. ಸ್ವಾತಂತ್ರ್ಯ ಸಡಗರಕ್ಕೆ 75 ವರ್ಷ ತುಂಬುತ್ತಿರುವ ಈ ಅಮೃತ ಘಳಿಗೆಯಲ್ಲಿ, ನಾಡಿನ ಸ್ವಾತಂತ್ರ್ಯ ಹೋರಾಟ ನಡೆದ ಸ್ಥಳಗಳಲ್ಲಿ ತಾಯಿ ಭಾರತಿಯನ್ನು ನೆನೆಯೋಣ. ಅವಳಿಗೆ ಕನ್ನಡದ ಆರತಿಯನ್ನು ಬೆಳಗೋಣ. #ಅಮೃತಭಾರತಿಗೆಕನ್ನಡದಾರತಿ
— Basavaraj S Bommai (@BSBommai) May 27, 2022
ಸ್ವಾತಂತ್ರ್ಯ #ಅಮೃತಮಹೋತ್ಸವ ವರ್ಷಾಚರಣೆ ಅಂಗವಾಗಿ ನಾಡಿನಾದ್ಯಂತ ದೇಶಭಕ್ತಿಯನ್ನು ಹುರಿದುಂಬಿಸಬಲ್ಲ #ಅಮೃತಭಾರತಿಗೆಕನ್ನಡದಾರತಿ ಕಾರ್ಯಕ್ರಮ ಚಾಲನೆಗೊಳ್ಳುತ್ತಿರುವುದು ನಮ್ಮ ಹೆಮ್ಮೆ.
ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಬಹುದೊಡ್ಡ ಪಾತ್ರವಹಿಸಿದ ಕರುನಾಡಿನ ಹೋರಾಟಗಾರರ ಸ್ಮರಣೆಯಲ್ಲಿ ಸರ್ವರೂ ಪಾಲ್ಗೊಳ್ಳೋಣ.
ಜೈ ಹಿಂದ್, ಜೈ ಕರ್ನಾಟಕ. pic.twitter.com/Lvnr5QUF8T
— Dr. Ashwathnarayan C. N. (@drashwathcn) May 27, 2022
ಹೈದರಾಬಾದ್ ವಿಮೋಚನಾ ಹೋರಾಟದ ಸಮಯದಲ್ಲಿ ನಮ್ಮ ಕರ್ನಾಟಕದ ಬೀದರ್ ಜಿಲ್ಲೆಯ ಗೋರಟಾ ಗ್ರಾಮದಲ್ಲಿ ಹೈದರಾಬಾದ್ ನಿಜಾಮನ ರಜಾಕರ ರಾಕ್ಷಸ ಪಡೆ ದೇಶಭಕ್ತರ ನರಮೇಧವನ್ನೇ ನಡೆಸಿತು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಮಯದಲ್ಲಿ ಬಲಿದಾನಿಗಳಿಗೆ ಗೌರವ ಅರ್ಪಿಸೋಣ. #ಅಮೃತಭಾರತಿಗೆಕನ್ನಡದಾರತಿ pic.twitter.com/Rc4shAuJ0Z
— Muniraju Gowda P M (@tulasimuniraju1) May 27, 2022
ದಕ್ಷಿಣದಲ್ಲೂ ಸ್ವಾತಂತ್ರ್ಯದ ಕಿಚ್ಚು ಹೆಚ್ಚಾಗಿಯೇ ಇತ್ತು!
ರಾಜ್ಯದ ಅನೇಕ ವೀರಗಾಥೆಯ ಬಗ್ಗೆ ನಮ್ಮೆಲ್ಲರಿಗೆ ತಿಳಿಯಲಿ. #ಅಮೃತಭಾರತಿಗೆಕನ್ನಡದಾರತಿ@karkalasunil @BJP4Karnataka pic.twitter.com/quuDd38pEi
— Sahana A (@SahanaA09) May 27, 2022
ಕನ್ನಡ ಮತ್ತು ಸಂಸ್ಕøತಿ ಇಲಾಖೆ ರಾಜ್ಯದಾದ್ಯಂತ ಹಮ್ಮಿಕೊಂಡಿರುವ ವಿನೂತನಕಾರ್ಯಕ್ರಮ ‘ಅಮೃತ ಭಾರತಿಗೆ ಕನ್ನಡದಾರತಿ'
'ಜಯ ಭಾರತ ಜನನಿಯ ತನುಜಾತೆ,ಜಯಹೇ ಕರ್ನಾಟಕ ಮಾತೆ'#ಅಮೃತಭಾರತಿಗೆಕನ್ನಡದಾರತಿ @HarshaKSN @anitareddybjp@KalanathNivane @ajavgal @harishkrcr @SajithGowda @Shruthi_Thumbri@BrindaAdige@RohitMath pic.twitter.com/5Q39S0ZeZ7— Narendra Murthy, ನರೇಂದ್ರ ಮೂರ್ತಿ (@Narendramurthy) May 27, 2022
#ಅಮೃತಭಾರತಿಗೆಕನ್ನಡದಾರತಿ Nagamma Patil asocial workers & freedom fighter. Sheworked closelyto upliftthe conditionof socially,educationally & economicallybackwardwomen in Karnataka.She was arrested&imprisoned and Hindalaga jaiin Belgaumparticipating infreedom struggle in 1938 &1942. pic.twitter.com/bH4VCHOAGz
— Anita Reddy Ashok (@anitareddybjp) May 27, 2022