Wednesday, November 29, 2023

Latest Posts

ಕಲಬುರಗಿ ಜಿಲ್ಲೆಯ ಇಬ್ಬರಿಗೆ ಒಲಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ಹೊಸದಿಗಂತ ವರದಿ, ಕಲಬುರಗಿ:

ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸಾಧನೆ ಮಾಡಿದ ಮಹನೀಯರನ್ನು ಗುರುತಿಸಿ ರಾಜ್ಯ ಸರ್ಕಾರ ಪ್ರತಿವರ್ಷ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಘೋಷಣೆ ಮಾಡಿ,ಅವರನ್ನು ಸತ್ಕರಿಸುವ ಕೆಲಸ ಮಾಡುತ್ತಿದ್ದು, ಅದರಂತೆ ಕಲಬುರಗಿ ಜಿಲ್ಲೆಯಲ್ಲಿಯೂ ಸಹ ಎರಡು ಕ್ಷೇತ್ರಗಳಾದ ಜಾನಪದ ಹಾಗೂ ಕೃಷಿ -ಪರಿಸರ ಸೇರಿದಂತೆ ಎರಡು ರಾಜ್ಯೋತ್ಸವ ಪ್ರಶಸ್ತಿ ಲಭಿಸಿವೆ.

ಇಬ್ಬರು ಮಹನೀಯರ ಪರಿಚಯ ಇಲ್ಲಿವೆ.

ಜಾನಪದ ಕ್ಷೇತ್ರ.
ಶ್ರೀಮತಿ ಶಕುಂತಲಾ ತಂದೆ ದೇವಲಾನಾಯಕ್,
ತಾಯಿ -ಗಂಗಾಬಾಯಿ.
ಹುಟ್ಟಿದ ವರ್ಷ -೧೯೬೦.
ವಿದ್ಯಾರ್ಹತೆ -೭ನೇ ತರಗತಿ.

ಉದ್ಯೋಗ -ಲಂಬಾಣಿ ಸಮುದಾಯಕ್ಕೆ ಸೇರಿದ ಶಕುಂತಲಾ ಅವರು ಕಳೆದ ೪೫ ವರ್ಷಗಳಿಂದ ಗೀಗಿ ಪದ ಹಾಡುವುದನ್ನೆ ತಮ್ಮ ಉದ್ಯೋಗ ಮಾಡಿಕೊಂಡಿದ್ದು,ನಗರದ ಎಲ್.ಐ.ಜಿ-೩,೧ನೇ ಕ್ರಾಸ್ ಆದರ್ಶ ನಗರದಲ್ಲಿ ವಾಸವಿದ್ದು, ಇವರಿಗೆ ರಾಜ್ಯ ಸರ್ಕಾರ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಎಂದು ಆಯ್ಕೆ ಮಾಡಲಾಗಿದೆ.

ಕೃಷಿ ಮತ್ತು ಪರಿಸರ ಕ್ಷೇತ್ರ
ಸೋಮನಾಥ ರೆಡ್ಡಿ ಜಿ.ಪೂರ್ಮಾ.

ತಂದೆ – ಚಂದ್ರರೆಡ್ಡಿ ಬಿ. ಪೂರ್ಮಾ.

ತಾಯಿ -ಜಗದೇವಮ್ಮಾ ಪೂರ್ಮಾ.

ಹುಟ್ಟಿದ ದಿನ -೧೫ನೇ ಆಗಸ್ಟ್ ೧೯೫೩

ವೃತ್ತಿ -ಕೃಷಿ

ಶಿಕ್ಷಣ -ಎಸ್.ಎಸ್.ಎಲ್.ಸಿ.

ಪತ್ನಿ-ಶ್ರೀಮತಿ ಅನ್ನಪೂರ್ಣ,
ಪುತ್ರಿಯರು -ಸತಿದೇವಿ ಮತ್ತು ಪಾರ್ವತಿ.

ಪುತ್ರರು-ಹನುಮಂತ್ ರೆಡ್ಡಿ ಮತ್ತು ಮಲ್ಲಿಕಾರ್ಜುನ ರೆಡ್ಡಿ.

ಸಾಗುವಳಿ ಮಾಡುತ್ತಿರುವ ಜಮೀನು-೧೮.೦ ಎ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!