ದಿಗಂತ ವರದಿ ಕಾಸರಗೋಡು:
ಸಾಲರೂಪದಲ್ಲಿ ಪೆಟ್ರೋಲ್ ನೀಡಲಿಲ್ಲ ಎಂದು ಕುಪಿತಗೊಂಡು ಉಳಿಯತ್ತಡ್ಕದಲ್ಲಿರುವ ಪೆಟ್ರೋಲ್ ಪಂಪ್ ವೊಂದರ ಮೇಲೆ ಆಕ್ರಮಣ ನಡೆಸಿ ಸುಮಾರು ಎರಡು ಲಕ್ಷ ರೂಪಾಯಿಗಳಷ್ಟು ನಾಶ ನಷ್ಟ ಉಂಟು ಮಾಡಿರುವುದನ್ನು ಖಂಡಿಸಿ ಕಾಸರಗೋಡು ಜಿಲ್ಲೆಯ ಪೆಟ್ರೊಲ್ ಪಂಪ್ ಗಳು ಇಂದು (ಫೆ.14ರಂದು ಸೋಮವಾರ) ಮಧ್ಯಾಹ್ನ ಬಳಿಕ ಪ್ರತಿಭಟನೆ ನಡೆಸಲಿವೆ.
ಅದರಂತೆ ಇಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ಪೆಟ್ರೋಲ್ ಪಂಪ್ ಬಂದ್ ಆಗಲಿರುವುದರಿಂದ ಪೆಟ್ರೊಲ್ ಉತ್ಪನ್ನಗಳನ್ನು ನೀಡಲಾಗುವುದಿಲ್ಲ ಎಂದು ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಶನ್ ನ ಕಾಸರಗೋಡು ಜಿಲ್ಲಾಧ್ಯಕ್ಷ ಕೆ.ಮಂಜುನಾಥ ಕಾಮತ್ ತಿಳಿಸಿದ್ದಾರೆ.