ಮಹಿಳೆಯ ಮಾಂಗಲ್ಯ ಕದ್ದಿದ್ದ ಖದೀಮನ ಬಂಧನ

ಹೊಸದಿಗಂತ ವರದಿ ಹೊನ್ನಾವರ:

ಚಂದಾವರದಲ್ಲಿ ಮಹಿಳೆಯೊಬ್ಬರ ಮಾಂಗಲ್ಯ ಸರ ಹರಿದು ಪರಾರಿಯಾಗಿದ್ದ ಕಳ್ಳನನ್ನು ಸೋಮವಾರ ಹೊನ್ನಾವರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮಾಂಗಲ್ಯ ಸಮೇತ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೊದ್ಕೆಶಿರೂರು ಹೂವಿನಹಿತ್ಲದ ಗಣಪತಿ ನಾಗಪ್ಪ ಗೌಡ (28) ಬಂಧಿತ ಆರೋಪಿ. ಭಾನುವಾರ ಚಂದಾವರದ ಶ್ರೀ ಹನುಮಂತ ದೇವಾಲಯದಲ್ಲಿ ಮದುವೆ ಸಮಾರಂಭ ನಡೆದಿತ್ತು.‌ ಮದುವೆ ಮುಗಿಸಿ ವಾಪಾಸಾಗುವಾಗ ಹೊದ್ಕೆಶಿರೂರಿನ ವೀಣಾ ತಿಮ್ಮಪ್ಪ ದೇಶಭಂಡಾರಿ ಅವರ ಕೊರಳಲ್ಲಿದ್ದ 30 ಗ್ರಾಂ ತೂಕದ, ಸರವನ್ನು ಕುತ್ತಿಗೆಗೆ ಕೈ ಹಾಕಿ, ಸರವನ್ನು ಹರಿದು ಅರಣ್ಯದಲ್ಲಿ ಪರಾರಿಯಾಗಿದ್ದ.

ವಿಷಯ ತಿಳಿದ ಹೊನ್ನಾವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರರಣವನ್ನು ಬೆನ್ನಟ್ಟಿದ ಪೊಲೀಸರು ಭಾನುವಾರ ತಡರಾತ್ರಿವರೆಗೂ ಕಾರ್ಯಾಚರಣೆ ನಡೆಸುವುದನ್ನು
ಮುಂದುವರಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!