ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶವನ್ನೇ ಬೆಚ್ಚಿಬೀಳಿಸಿದ್ದ ಚಂಡೀಘಡದ ಡಿಎಸ್ಪಿ ಸುರೇಂದರ್ ಸಿಂಗ್ ಬರ್ಬರ ಹತ್ಯೆಗೆ ಸಂಬಂಧಿಸಿದಂತೆ ಓರ್ವನನ್ನು ಹರಿಯಾಣ ಪೊಲೀಸರು ಗುಂಡಿಕ್ಕಿ ಬಂಧಿಸಿದ್ದಾರೆ.
ಪಂಚಗಾಂವ್ ಪ್ರದೇಶದ ಅರವಳ್ಳಿ ಹಿಲ್ಸ್ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂಬ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿದ್ದ ಡಿಎಸ್ಪಿ ಸುರೇಂದರ್ ಸಿಂಗ್ ಮೇಲೆ ಲಾರಿ ಹರಿಸಿ ಬರ್ಬರವಾಗಿ ಹತ್ಯೆ ನಡೆಸಲಾಗಿತ್ತು. ಸಿಂಗ್ ದಾಖಲೆ ಪರಿಶೀಲನೆಗೆ ಲಾರಿ ನಿಲ್ಲಿಸುವಂತೆ ಸೂಚಿಸಿದ್ದರೂ ಚಾಲಕ ಮತ್ತಷ್ಟು ವೇಗವಾಗಿ ಓಡಿಸಿ ಅವರನ್ನು ಕೊಂದಿದ್ದ. ಈ ಘಟನೆಯಲ್ಲಿ ಡಿಎಸ್ಪಿ ಜೊತೆಗಿದ್ದ ಗನ್ಮ್ಯಾನ್, ಚಾಲಕ ಪಕ್ಕಕ್ಕೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದರು.
ಈ ಘಟನೆಗೆ ಸಂಬಂಧಿಸಿ ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು, ಓರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ