ಹೊಸದಿಗಂತ ವರದಿ, ಕುಶಾಲನಗರ:
ಕೊಡಗು ಜಿಲ್ಲಾ ಭಾರತೀಯ ಜನತಾ ಪಾರ್ಟಿ ವತಿಯಿಂದ 8ನೇ ವರ್ಷದ ವಿಶ್ವ ಯೋಗ ದಿನವನ್ನು ಕುಶಾಲನಗರದಲ್ಲಿ ಆಚರಿಸಲಾಯಿತು.
ಕುಶಾಲನಗರದ ರೈತ ಸಹಕಾರ ಭವನದ ಆವರಣದಲ್ಲಿ ನಡೆದ ಯೋಗಾಭ್ಯಾಸಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಚಾಲನೆ ನೀಡಿದರು.
ಕುಶಾಲನಗರದ ಸಾರ್ವಜನಿಕರು, ಪಕ್ಷದ ಕಾರ್ಯಕರ್ತರು ಯೋಗಾಭ್ಯಾಸದಲ್ಲಿ ಭಾಗಿಯಾದರು.
ಯೋಗ ಶಿಬಿರದ ಜಿಲ್ಲಾ ಸಂಯೋಜಕ ಅರುಣ್ ಭೀಮಯ್ಯ, ಸಹ ಸಂಯೋಜಕ ಲೋಕೇಶ್, ಜಿಲ್ಲಾ ಕಾರ್ಯದರ್ಶಿ ಅಮೃತ್ರಾಜ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರಾದ ಡಿ.ವಿ.ಗಣೇಶ್, ಶಿವರಾಂ ಯೋಗಾಸನಗಳ ಬಗ್ಗೆ ಮಾಹಿತಿ ಹಾಗೂ ಮಾರ್ಗದರ್ಶನ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾ ಪ್ರಭಾರಿ ಬಿ. ಬಿ. ಭಾರತೀಶ್, ಪ.ಪಂ.ಅಧ್ಯಕ್ಷ ಜೈವರ್ಧನ್, ಬಿಜೆಪಿ ಪ್ರಮುಖ್ ಉಮಾಶಂಕರ್, ಜಿಲ್ಲಾ ಬಿಜೆಪಿ ಘಟಕ, ತಾಲೂಕು ಘಟಕದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.