ಹೊಸದಿಗಂತ ವರದಿ, ಕೊಡಗು:
ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೊಡಗು ಜಿಲ್ಲೆಯ ಟಿ. ಶೆಟ್ಟಿಗೇರಿ ಮೂಲದ ಕೊಟ್ರಮಾಡ ಪಿ. ನರೇಂದ್ರ ಅವರು ಕರ್ನಲ್ ಆಗಿ ಮುಂಬಡ್ತಿ ಹೊಂದಿದ್ದಾರೆ.
ಸಿಕಂದರಾಬಾದ್ನ ಆರ್ಮಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಕೊಟ್ರಮಾಡ ಡಿ. ಪೆಮ್ಮಯ್ಯ-ಸೀತಮ್ಮ ದಂಪತಿಯ ಪುತ್ರರಾಗಿದ್ದಾರೆ.