ಹೊಸದಿಗಂತ ವರದಿ ಸೋಮವಾರಪೇಟೆ:
ಕರ್ನಾಟಕ ರಾಜ್ಯ ಮೀಸಲು ಪಡೆಯ(ಕೆ.ಎಸ್.ಆರ್.ಪಿ) ಅಧಿಕಾರಿಯೊಬ್ಬರು ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಮೂಲತಃ ಹಾನಗಲ್ ಶೆಟ್ಟಳ್ಳಿಯವರಾಗಿದ್ದು, ಪ್ರಸಕ್ತ ಹಾಸನದ 11ನೇ ಬೆಟಾಲಿಯನ್’ನಲ್ಲಿ ಎಎಸ್ಐಯಾಗಿದ್ದ ಹೆಚ್.ಎಂ.ಆನಂದ್ (58) ಎಂಬ ಅಧಿಕಾರಿ ಗುರುವಾರ ರಾತ್ರಿ ಹೃದಯಾಘಾತಕ್ಕೊಳಗಾಗಿದ್ದಾರೆ.
1992ರಲ್ಲಿ ಕೆಎಸ್ಆರ್ಪಿ ಸೇವೆಗೆ ಸೇರ್ಪಡೆಗೊಂಡಿದ್ದ ಆನಂದ್ ವೀರಪ್ಪನ್ ಕಾರ್ಯಾಚರಣೆಯ ಎಸ್ಟಿಎಫ್’ನಲ್ಲೂ 5 ವರ್ಷ ಸೇವೆ ಸಲ್ಲಿಸಿದ್ದರಲ್ಲದೆ, ಮೈಸೂರು, ಮಂಗಳೂರಿನಲ್ಲೂ ಕರ್ತವ್ಯ ನಿರ್ವಹಿಸಿದ್ದರು. ಆನಂದ್ ಅವರು ಹಾನಗಲ್ ಶೆಟ್ಟಳ್ಳಿಯ ದಿ.ಹೆಚ್.ಈ.ಮಲ್ಲಯ್ಯ ಹಾಗೂ ಲೀಲಾವತಿ ದಂಪತಿಯ ಪುತ್ರರಾಗಿದ್ದು, ಮೃತರು ಪತ್ನಿ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.