ಹೊಸದಿಗಂತ ಡಿಜಿಟಲ್ ಡೆಸ್ಕ್ :
ಅತ್ತೆ ಮತ್ತು ಸಿ.ಎಸ್ ಚಂದ್ರಶೇಖರ್ ಹಾಕಿರುವ ಸವಾಲಿನಲ್ಲಿ ಸತ್ಯ ಮತ್ತು ನ್ಯಾಯದ ಹಾದಿ ಹಿಡಿದ ನಕ್ಷತ್ರಾ ಗೆದ್ದಿದ್ದಾಳೆ. ಸದಾ ಕೆಟ್ಟದ್ದನ್ನೇ ಬಯಸುವ ಶ್ವೇತಾಳ ಪರಿಸ್ಥಿತಿ ಮಾಡಿದ್ದುಣ್ಣೋ ಮಾರಾಯ ಎನ್ನುವಂತಾಗಿದೆ.
ಕಲರ್ಸ್ ಕನ್ನಡ ಧಾರವಾಹಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷಣ ಧಾರವಾಹಿಯ ಕಳೆದ ಸಂಚಿಕೆಗಳಲ್ಲಿ ಮನೆಗೆ ಸೂಕ್ತ ಸೊಸೆ ಯಾರು ಎನ್ನುವ ಸವಾಲಿನಲ್ಲಿ ನಕ್ಷತ್ರಾ ಗೆದ್ದಿದ್ದಾಳೆ. ನಂತರ ತನ್ನ ಕುಹಕ ಬುದ್ದಿಯಿಂದಲೇ ಅತ್ತೆಯನ್ನು ಓಲೈಸಲು ಶ್ವೇತಾ ಮುಂದಾಗಿದ್ದಾಳೆ.
ಉಪ್ಪು ತಿಂದವ ನೀರು ಕುಡಿಯಲೇಬೇಕು ಎಂಬ ಗಾದೆ ಮಾತಿನಂತೆ ಅತ್ತೆಯ ನೇರ ನುಡಿಗಳಿಗೆ ಶ್ವೇತಾ ಈಗ ತತ್ತರಿಸಿ ಹೋಗಿದ್ದಾಳೆ. ಸೋತ ಸಿಂಹಿಣಿಯ ಘರ್ಜನೆ ಹೇಗಿರತ್ತೆ ಅಂತ ಮುಂದಿನ ಸಂಚಿಕೆಗಳಲ್ಲಿ ಕಾದು ನೋಡಬೇಕಿದೆ.