ಹೊಸದಿಗಂತ ಡಿಜಿಟಲ್ ಡೆಸ್ಕ್, ಹುಬ್ಬಳ್ಳಿ
ಗದಗ ಜಿಲ್ಲೆಯ ಹಿಂದೂ ಯುವತಿ ಅಪೂರ್ವಾ ಪುರಾಣಿಕ ಮೇಲೆ ದೌರ್ಜನ್ಯ ಎಸಗಿದ ಆರೋಪಿಯನ್ನು ಗಲ್ಲಿಗೆರಿಸಬೇಕು ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್, ಭಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದಲ್ಲಿ ಗುರುವಾರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದ 200 ಕ್ಕೂ ಹೆಚ್ಚಿನ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಕಾರ್ಯಕರ್ತರು, ಲವ್ ಜಿಹಾದ್ ನಡೆಸುವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಎಂದು ಒತ್ತಾಯಿಸಿದರು.
ಹಿಂದೂ ಯುವತಿ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನು ಗಲ್ಲಿಗೆರಿಸಿ, ಲವ್ ಜಿಹಾದ್ ಜಿಹಾದ್ ಅಂತ್ಯಗೊಳ್ಳಲಿ ಎಂಬ ಘೋಷಣೆಗಳು ಪ್ರತಿಭಟನೆ ವೇಳೆ ಕೇಳಿಬಂದವು.
ವಿಶ್ವ ಹಿಂದೂ ಪರಿಷತ್ ನ ಪ್ರಮುಖರಾದ ಕೆ. ಗೋವರ್ಧನರಾವ್, ರಮೇಶ ಗೋಕಾಕ, ಮಹೇಶ ಜೋಶಿ, ದತ್ತಮೂರ್ತಿ ಕುಲಕರ್ಣಿ, ಸುಭಾಸ ಸಿಂಗ್ ಜಮಾದಾರ, ಚಂದ್ರಶೇಖರ ಗೋಕಾಕ, ಪ್ರಭುನವಲಗುಂದ ಮಠ ಪ್ರತಿಭಟನೆ ವೇಳೆ ಇದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ