ಹೊಸದಿಗಂತ ವರದಿ,ಬಾಗಲಕೋಟೆ:
ಬರುವ ಜ.೧೫ ರೊಳಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಜಿಲ್ಲೆಯ ಬಾಡಗಂಡಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಚುನಾವಣೆ ಸಮಿತಿ ಸಭೆನಡೆಯಲಿದೆ. ಯಾವ ರೀತಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಏನೇನು ಮಾನದಂಡ? ಎಲ್ಲವನ್ನೂ ಮೀಟಿಂಗ್ ನಲ್ಲಿ ತೀರ್ಮಾನ ಮಾಡುತ್ತೇವೆ.ನಾವಣೆ ಪ್ರಕ್ರಿಯೆ ಆರಂಭ ಆಗಿದೆ.೧೩೫೦ ಅಪ್ಲಿಕೇಶನ್ ಗಳು ಬಂದಿವೆ.ಎಲ್ಲವನ್ನೂ ಕೂಡಾ ನಾವು ತಯಾರಿ ಮಾಡಿಕೊಳ್ಳುತ್ತಿದ್ದೇವೆ ಎಂದರು.
ಸುವರ್ಣ ಸೌಧದಲ್ಲಿ ಸಾವರ್ಕರ್ ಫೋಟೊ ಅನಾವರಣ ವಿಚಾರ ಊಹಾಪೋಹ ನಂಬಲ್ಲ. ಸಾವರ್ಕರ್ ಗೂ ಕರ್ನಾಟಕಕ್ಕೂ ಏನ ಸಂಬಂದ? ಕಾರ್ಯಕ್ರಮಕ್ಕೆ ಬರುವಂತೆ ಸ್ಪೀಕರ್ ಕಚೇರಿಯಿಂದ ನನಗೆ ಆಹ್ವಾನ ಬಂದಿದೆ.ಸಾವರ್ಕರ್ ಫೋಟೊ ವಿಚಾರ ಏನು ಹೇಳಿಲ್ಲ ಎಂದರು.
ಕುಕ್ಕರ್ ಬ್ಲಾಸ್ಟ್ ಡಿಕೆಶಿ ಸಮರ್ಥನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆಶಿ ನಾನೇಕೆ ಸಮರ್ಥನೆ ಮಾಡಿಕೊಳ್ಳಲಿ.
ಬಿಜೆಪಿಗರೇ ಇದನ್ನೆಲ್ಲಾ ಸೃಷ್ಠಿ ಮಾಡುತ್ತಿದ್ದಾರೆ.ಡಿಕೆಶಿಗೆ ನೊಬೆಲ್ ಪ್ರಶಸ್ತಿ ಕೊಡಬೇಕು ಎಂಬ ಆರ್.ಅಶೋಕ ಹೇಳಿಕೆ ವಿಚಾರಕ್ಕೆ ಡೇಟ್ ಫಿಕ್ಸ್ ಮಾಡಲಿ, ನಾನು ರೆಡಿ ಇದ್ದೇನೆ. ಸ್ವೀಕಾರ ಮಾಡಲಿಕ್ಕೆ ಎಂದರು.