ದುರ್ಗಾ ಮೂರ್ತಿ ವಿಸರ್ಜನೆ ವೇಳೆ ಮಸೀದಿ ಬಳಿ ಜೋರಾದ ಸಂಗೀತ, ಎರಡು ಸಮುದಾಯದ ನಡುವೆ ಹೊಡೆದಾಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರಪ್ರದೇಶದ ಬಾಲ್ದಿರಾಯ್ ಪ್ರದೇಶದಲ್ಲಿ ಎರಡು ಸಮುದಾಯಗಳ ನಡುವೆ ಕಲ್ಲು ತೂರಾಟ ನಡೆದಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.

ದುರ್ಗಾ ಮೂರ್ತಿ ವಿಸರ್ಜನೆ ವೇಳೆ ಮಸೀದಿ ಬಳಿ ಜೋರಾಗಿ ಹಾಡುಗಳನ್ನು ಹಾಕಿದ್ದಾರೆ ಎನ್ನುವ ಕಾರಣಕ್ಕೆ ಮಾರಾಮಾರಿ ಆರಂಭವಾಗಿದೆ. ಇಬ್ರಾಹಿಂಪುರದ ಮಸೀದಿಯಲ್ಲಿ ದುರ್ಗಾಮೂರ್ತಿ ವಿಸರ್ಜನೆ ವೇಳೆ ಆಜಾನ್ ನಡೆಯುತ್ತಿತ್ತು. ಈ ಸಮಯದಲ್ಲೇ ಜೋರಾಗಿ ಹಾಡುಗಳನ್ನು ಹಾಕಿದ್ದರಿಂದ ಗಲಾಟೆ ನಡೆದಿದೆ.

ಶಬ್ದ ಕಡಿಮೆ ಮಾಡಲು ಸೂಚಿಸಿದ ಕಾರಣ ಜಗಳ ನಡೆದಿದ್ದು, ಕಲ್ಲು ತೂರಾಟ ಮಾಡಲಾಗಿದೆ. ಈ ವೇಳೆ ಆರು ಮದಿ ಗಾಯಗೊಂಡಿದ್ದಾರೆ. ಪೊಲೀಸರು ತಕ್ಷಣವೇ ಸ್ಥಳಕ್ಕೆ ಆಗಮಿಸಿ, ಪರಿಸ್ಥಿತಿ ಹತೋಟಿಗೆ ಪಡೆದಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!