ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡಿಗರಿಗೆ ಅನಂತ ಅನಂತ ಧನ್ಯವಾದಗಳು, ಈ ನೆಲದಲ್ಲಿ ಪ್ರೀತಿ ಹಬ್ಬಿದೆ, ದ್ವೇಷ ಕಿತ್ತೊಗೆದಿದ್ದೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ನಾವು ಯಾವೆಲ್ಲಾ ಗ್ಯಾರೆಂಟಿ ಘೋಷಣೆ ಮಾಡಿದ್ದೀವೋ ಅವುಗಳನ್ನು ಪೂರ್ತಿಗೊಳಿಸುತ್ತೇವೆ. ಸಂಪುಟ ಸಭೆಯಲ್ಲಿ ಎಲ್ಲ ಗ್ಯಾರೆಂಟಿಗಳು ಅನುಮೋದನೆ ಆಗಲಿದೆ. ಅಭಿವೃದ್ಧಿಗೆ ಬೆಂಬಲ ನೀಡಿದ ಜನತೆಗೆ ಧನ್ಯವಾದಗಳು. ನಮ್ಮದು ನುಡಿದಂತೆ ನಡೆಯುವ ಸರ್ಕಾರ ಇಲ್ಲಿ ಯಾವುದೇ ಮೋಸ ಇಲ್ಲ ಎಂದು ಹೇಳಿದ್ದಾರೆ.