ಕೊಡಗು ಎಸ್ಪಿಯಾಗಿ ಎಂ.ಎ.ಅಯ್ಯಪ್ಪ ನೇಮಕ

ಹೊಸದಿಗಂತ ವರದಿ,ಮಡಿಕೇರಿ:

ಕೊಡಗು ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಕ್ಷಮಾ ಮಿಶ್ರಾ ಅವರನ್ನು ವರ್ಗಾವಣೆ ಮಾಡಿರುವ ರಾಜ್ಯ ಸರಕಾರ, ನೂತನ ವರಿಷ್ಠಾಧಿಕಾರಿಯಾಗಿ ಕೊಡಗಿನ ಗೋಣಿಕೊಪ್ಪದವರಾದ ಮಲಚಿರ ಎ.ಅಯ್ಯಪ್ಪ ಅವರನ್ನು ನೇಮಿಸಿ ಆದೇಶ ಹೊರಡಿಸಿದೆ.
ಕಳೆದ‌ ಒಂದೂವರೆ ವರ್ಷದಿಂದ ಕೊಡಗು ಪೊಲೀಸ್ ವರಿಷ್ಠಾಧಿಕಾರಿಯಾಗಿ ಕ್ಷಮಾ ಮಿಶ್ರಾ ಕರ್ತವ್ಯ ನಿರ್ವಹಿಸಿದ್ದು, ಎಂ.ಎ.ಅಯ್ಯಪ್ಪ ಅವರು ಕರ್ನಾಟಕ ಪವರ್ ಕಾರ್ಪೋರೇಷನ್’ನ ವಿಜಿಲೆ‌ನ್ಸ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!