ಮಧ್ಯಪ್ರದೇಶದ ಈ ವ್ಯಕ್ತಿಗೆ ಪ್ರಧಾನಿ ಮೋದಿ ಪತ್ರ ಬರೆದರೇಕೆ?

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಸುಧೀರ್ ಕುಮಾರ್ ಜೈನ್ ಎಂಬುವವರಿಗೆ ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದಿದ್ದಾರೆ.

ಸುಧೀರ್ ಕುಮಾರ್ ಜೈನ್ ಯಾರೋ ಅತಿಗಣ್ಯ ವ್ಯಕ್ತಿ ಇರಬೇಕು ಅಂದುಕೊಂಡ್ರಾ?

ಹಾಗೇನಿಲ್ಲ. ಅವರು ಪ್ರಧಾನ ಮಂತ್ರಿ ಆವಾಸ ಯೋಜನೆಯಲ್ಲಿ ಇತ್ತೀಚೆಗೆ ಪಕ್ಕಾ ಮನೆ ಪಡೆದಿದ್ದರು. ಈ ಬಗ್ಗೆ ಪ್ರಧಾನಿಯವರಿಗೆ ಪತ್ರ ಬರೆದು ಸಂತಸ ವ್ಯಕ್ತಪಡಿಸಿದ್ದರು.

ಇದೀಗ, ಪ್ರಧಾನಿ ನರೇಂದ್ರ ಮೋದಿ ತಿರುಗಿ ಪತ್ರ ಬರೆದಿದ್ದು- “ಮನೆಯೆಂದರೆ ಕೇವಲ ಇಟ್ಟಿಗೆ-ಸಿಮೆಂಟುಗಳಿಂದ ಮಾಡಿದ ನಿರ್ಮಿತಿ ಅಲ್ಲ. ಅದರೊಂದಿಗೆ ಭಾವನೆಗಳು, ನಮ್ಮ ಮಹಾತ್ವಾಕಾಂಕ್ಷೆ ಬೆಸೆದುಕೊಂಡಿರುತ್ತದೆ. ಮನೆಯ ಸುತ್ತಲಿನ ಗಡಿಬೇಲಿ ನಮಗೆ ಸುರಕ್ಷತಾಭಾವವನ್ನು ಕೊಡುವುದಷ್ಟೇ ಅಲ್ಲ, ನಾಳೆಗಳು ಅದ್ಭುತವಾಗಿರುತ್ತವೆ ಎಂಬ ಆತ್ಮವಿಶ್ವಾಸವನ್ನೂ ಕೊಡುತ್ತದೆ” ಎಂದು ಹೇಳಿದ್ದಾರೆ.

ನಿಮ್ಮಂತೆಯೇ ಕೋಟ್ಯಂತರ ಜನರ ಪಾಲಿಗೆ ಪಕ್ಕಾ ಮನೆ ಪಡೆಯುವ ಆಶಯ ನನಸಾಗಿದೆ, ಅಂಥ ಎಲ್ಲ ಕುಟುಂಬಗಳ ಅಗತ್ಯ ಪೂರೈಸುವ ಸರ್ಕಾರ ಇದಾಗಿದೆ ಎಂದೂ ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!