ಮಡಿಕೇರಿ: ವಿಹಾರಕ್ಕೆ ತೆರಳಿದ್ದ ಬಾಲಕ ಶವವಾಗಿ ಪತ್ತೆ

ಹೊಸದಿಗಂತ ವರದಿ, ಮಡಿಕೇರಿ
ಸ್ನೇಹಿತರೊಂದಿಗೆ ವಿಹಾರಕ್ಕೆ ತೆರಳಿದ್ದ ಯುವಕನೊಬ್ಬ ಹೊಳೆಗೆ ಕಾಲುಜಾರಿ ಬಿದ್ದು ಮೃತಪಟ್ಟ ಘಟನೆ ಸಮೀಪದ ಬಲ್ಲಮಾವಟಿ ಸಮೀಪದ ಪೇರೂರು ಗ್ರಾಮದಲ್ಲಿ ಜರುಗಿದೆ.
ಕೊಟ್ಟಮುಡಿಯ ಹ್ಯಾರೀಸ್ ಅವರ ಮಗ ಅಪ್ಸಲ್ (17) ಮೃತಪಟ್ಟ ಯುವಕ.
ನಾಪೋಕ್ಲು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಕೊಟ್ಟಮುಡಿಯ ಮರ್ಕಝ್ ಶಾಲೆಯ ವಿದ್ಯಾರ್ಥಿ ಅಫ್ಸಲ್ ಇತ್ತೀಚೆಗೆ ಪ್ರಕಟವಾಗಿದ್ದ 10 ನೇ ತರಗತಿ ಪರೀಕ್ಷೆಯಲ್ಲಿ  ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಿದ್ದ. ತನ್ನ ಇತರ ಆರು ಮಂದಿ ಸ್ನೇಹಿತರೊಂದಿಗೆ ಆತ ವಿಹಾರಕ್ಕೆ ತೆರಳಿದ್ದಾಗ ದುರ್ಘಟನೆ ಸಂಭವಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!