ಭೀಕರ ರಸ್ತೆ ಅಪಘಾತ: ಮಲಯಾಳಂ ನಟ ಕೊಲ್ಲಂ ಸುಧಿ ದುರ್ಮರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಲಯಾಳಂ ನಟ ಮತ್ತು ಮೂಕಾಭಿನಯ (ಮೈಮ್​) ಕಲಾವಿದ ಕೊಲ್ಲಂ ಸುಧಿ ಇಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ತ್ರಿಶೂರ್​ನ ಕೈಪಮಂಗಲಂ ಪಣಾಂಬಿಕುನ್​ನಲ್ಲಿ ಬೆಳಗಿನ ಜಾವ 4.30ರ ಸುಮಾರಿಗೆ ಪ್ರಯಾಣಿಸುತ್ತಿದ್ದ ವೇಳೆ ಕಾರು ಎದುರಿನಿಂದ ಬರುತ್ತಿದ್ದ ಪಿಕಪ್​ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಸುಧಿ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದುರದೃಷ್ಟವಶಾತ್​ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಇನ್ನೂ ಸುಧಿ ಜೊತೆ ನಟ ಬಿನು ಅಡಿಮಲಿ, ಉಲ್ಲಾಸ್​ ಆರೂರ್​ ಮತ್ತು ಮಹೇಶ್​ ಕೂಡ ಜೊತೆಗಿದ್ದರು. ಅವರಿಗೂ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಲ್ಲಂ ಸುಧಿ ಕಿರುತೆರೆ ಜೊತೆಗೆ ಬೆಳ್ಳಿತೆರೆಯ ಮೂಲಕವೂ ಜನರ ಮನಗೆದ್ದಿದ್ದರು. 2015ರಲ್ಲಿ ತೆರೆಕಂಡ ಕಾಂತಾರಿ ಚಿತ್ರದ ಮೂಲಕ ಸುಧಿ ಮಲಯಾಳಂ ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ನಂತರದಲ್ಲಿ ಅವರು ಕಟ್ಟಪ್ಪನಾಯಿಲೆ ಋತ್ವಿಕ್ ರೋಷನ್, ಕುಟ್ಟನಾಡನ್ ಮಾರ್ಪಪ್ಪ, ತೀಟ್ಟ ರಪ್ಪೈ, ವಕತಿರಿವು, ಅಂತರಾಷ್ಟ್ರೀಯಂ ಲೋಕಲ್ ಸ್ಟೋರಿ, ಎಸ್ಕೇಪ್, ಕೇಸು ಈ ವೀಡಿಂಟೆ ನಾಧನ್, ಎಸ್ಕೇಪ್, ಮತ್ತು ಸ್ವರ್ಗತೀಲೆ ಕಟ್ಟುರುಂಬು ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!