ಹೊಸದಿಗಂತ ವರದಿ ಗಂಗಾವತಿ:
ದಿ.ಪುನೀತ್ ರಾಜ್ಕುಮಾರ್ ನಿಧನರಾಗಿ ವರ್ಷ ಕಳೆದರೂ, ಅವರ ಮೇಲಿನ ಪ್ರೀತಿ ಇನ್ನೂ ಕಡಿಮೆಯಾಗಿಲ್ಲ. ಹನುಮಮಾಲಾ ಧರಿಯೊಬ್ಬರು ನಟ ದಿ. ಪುನೀತ್ ರಾಜ್ಕುಮಾರ್ ಫೋಟೋ ಹಿಡಿದು ಅಂಜನಾದ್ರಿ ಬೆಟ್ಟ ಹೇರಿದ್ದಾರೆ.
ಬೆಳಗಾವಿ ಜಿಲ್ಲೆಯ ಕಿತ್ತೂರಿನ ಗುರುವಾರ್ ಪೇಟೆ ಗ್ರಾಮದ ರೈತರ ಓಣಿಯ ಮನೋಜ್, ರವಿ, ಸಾಯಿಕುಮಾರ್ ಎಂಬ ಮಾಲಾಧಾರಿಗಳು ಅಪ್ಪು ಫೋಟೋ ಹಿಡಿದು ಬೆಟ್ಟ ಸುತ್ತಲೂ ಸುತ್ತಾಡಿದರು.
ಕಿತ್ತೂರಿನಿಂದ ಭಾನುವಾರ ಸಂಜೆ 8 ಕ್ರೂಷರ್ ಮೂಲಕ 70 ಮಂದಿ ಮಾಲಾಧಾರಿಗಳು ಅಂಜನಾದ್ರಿಗೆ ಪ್ರಯಾಣ ಬೆಳೆಸಿದ್ದು, ಸೋಮವಾರ ಬೆಳಗ್ಗೆ 5 ಗಂಟೆಗೆ ಅಂಜನಾದ್ರಿಗೆ ಬಂದಿದ್ದಾರೆ.