ಹೊಸದಿಗಂತ ವರದಿ, ಕಲಬುರಗಿ:
ಚಲಿಸುತ್ತಿದ್ದ ಬಸ್ ಹಾಗೂ ಆಟೋಗಳ ಮೇಲೆ ಬುದ್ದಿಮಾಂದ್ಯ ವ್ಯಕ್ತಿಯೋರ್ವ ಕಲ್ಲು ತೂರಾಟ ಮಾಡಿದ ಘಟನೆ ಕಲಬುರಗಿ ನಗರದ ಸರ್ಕಾರಿ ಮುದ್ರಾಣಲಾಯದ ಬಳಿ ನಡೆದಿದೆ.
ಅರೆಬೆತ್ತಲೆಯಾಗಿ ಓಡಾಡುತ್ತಿದ್ದ ವ್ಯಕ್ತಿ ಏಕಾಏಕಿ ವಾಹನಗಳ ಮೇಲೆ ಕಲ್ಲು ತುರಾಟ ಮಾಡಿದ್ದಾನೆ. ಇದರಿಂದ ಒಂದು ಸರ್ಕಾರಿ ಬಸ್, ಒಂದು ಕಾರು ಮತ್ತು ಎರಡು ಆಟೋಗಳ ಗಾಜು ಪುಡಿಪುಡಿಯಾಗಿದೆ.
ಪರಿಸ್ಥಿತಿಯನ್ನು ನೋಡಿ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.