ಹೊಸದಿಗಂತ ವರದಿ ಯಲ್ಲಾಪುರ:
ಯಲ್ಲಾಪುರದ ಕಳಚೆಯ ಕಾಳಿ ಹಿನ್ನೀರಿನಲ್ಲಿ ಮೀನು ಹಿಡಿಯಲು ತೆರಳಿದ್ದ ವ್ಯಕ್ತಿ ಮುಳುಗಿ ಮೃತಪಟ್ಟಿದ್ದಾರೆ.
ಕಳಚೆಯ ಬಾರೆ ಗ್ರಾಮದ ಪ್ರದೀಪ್ ಕುಣಬಿ(21) ಮೃತರು. ಕೂಡಲೇ ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ದಳಸಿಬ್ಬಂದಿ ಗಳು ನೀರಿನಲ್ಲಿ ಮುಳುಗಿದ್ದ ವ್ಯಕ್ತಿಯ ಮೃತ ಶರೀರವನ್ನು ಹೊರ ತೆಗೆದರು.