ಬೆಂಗಳೂರು: ಪುಟ್ಟ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ವ್ಯಕ್ತಿಗೆ ಮರಣದಂಡನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಒಂದು ವರ್ಷದ ಗಂಡು ಮಗುವಿನೊಂದಿಗೆ ಅಸಹಜ ಲೈಂಗಿಕ ದೌರ್ಜನ್ಯ ನಡೆಸಿ ಕೊಂದುಹಾಕಿದ್ದ ವ್ಯಕ್ತಿಗೆ ಇಲ್ಲಿನ ತ್ವರಿತಗತಿಯ ವಿಶೇಷ ನ್ಯಾಯಾಲಯವು(ಎಪ್ ಟಿಎಸ್‌ ಸಿ)  ಮರಣದಂಡನೆ ಶಿಕ್ಷೆಯನ್ನು ವಿಧಿಸಿದೆ.
2015 ರಲ್ಲಿ ಈ ಧಾರುಣ ಘಟನೆ ನಡೆದಿತ್ತು. ಯಶವಂತಪುರದ ಕರಿಮಣಿ ಕೊಳಚೆ ಪ್ರದೇಶದ ನಿವಾಸಿ ಮೂರ್ತಿ ಅಲಿಯಾಸ್‌ ಹಲ್ಲುಜ್ಜ (25) ಎಂಬಾತ ಪುಟ್ಟ ಮಗುವಿನ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿ ಕೊಂದು ಹಾಕಿದ್ದ.
ನ್ಯಾಯಾಧೀಶ ಕೆ.ಎನ್.ರೂಪ ಅವರು ಐಪಿಸಿಯ ಸೆಕ್ಷನ್ 302 (ಕೊಲೆ), ಮತ್ತು ಐಪಿಸಿಯ ಸೆಕ್ಷನ್ 377 (ಅಸ್ವಾಭಾವಿಕ ಲೈಂಗಿಕ ಕ್ರಿಯೆ) ಅಡಿಯಲ್ಲಿ ಶಿಕ್ಷೆ ಮತ್ತು ಅಪರಾಧಿಗೆ 50,000 ರೂ.ಗಳ ದಂಡವನ್ನು ವಿಧಿಸಿದರು. ಮೃತ ಬಾಲಕನ ಕುಟುಂಬಕ್ಕೆ ₹5 ಲಕ್ಷ ಪರಿಹಾರ ನೀಡುವಂತೆ ಬೆಂಗಳೂರು ನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ.
ಆರೋಪಿಗಳು ಮತ್ತು ಸಂತ್ರಸ್ಥ ಮಗುವಿನ ತಂದೆ ಪರಸ್ಪರ ಪರಿಚಿತರು. ಸೆಪ್ಟೆಂಬರ್ 12, 2015 ರಂದು, ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಗುವಿನ ತಂದೆ ಮಗನನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಆರೋಪಿಗೆ ವಹಿಸಿ ತಿಂಡಿ ತರಲು ರಾಜಗೋಪಾಲನಗರದ ಮುಖ್ಯರಸ್ತೆಯತ್ತ ತೆರಳಿದ್ದರು. ಅವರು ಬರುವಷ್ಟರಲ್ಲಿ ಆರೋಪಿ ಮಗುವನ್ನು ಎತ್ತಿಕೊಂಡು ಪರಾರಿಯಾಗಿದ್ದ.
ಬಳಿಕ ಆರೋಪಿಗಳು ಮಗುವನ್ನು ಯಶವಂತಪುರ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಮಗುವಿನ ಅಳು ಕೇಳಿ ಯಾರಾದರೂ ಬರಬಹುದೆಂಬ ಭಯದಿಂದ ಮಗುವಿನ ತಲೆಮೇಲೆ ಸಿಮೆಂಟ್‌ ಮೌಲ್ಡ್‌ ಎತ್ತಿ ಹಾಕಿ ಕೊಲಿ ಮಾಡಿದ್ದ. ಈ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿ, ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!