ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುಪಿಯ ಇಟಾವಾದಲ್ಲಿ ಸಲೀಂ (35) ಎಂಬ ಯುವಕ ಸ್ಥಳೀಯ ಅಂಗಡಿಯವನಿಗೆ 20 ರೂ ಸಾಲ ನೀಡಬೇಕಿದ್ದ ವಿಚಾರಕ್ಕೆ ಬೇಸತ್ತು ಎಲ್ಲೆರೆದರೆ ನೋಡ ನೋಡುತ್ತಿದ್ದಂತೆ ರೈಲಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಲೀಂ ಅಂಗಡಿಗೆ ಹೋಗಿ ಪಾನ್ ಬೇಕೆಂದು ಕೇಳಿದ್ದಾನೆ. ಸಾಲದ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದೆ. ಅಂಗಡಿಯವನು ಸಲೀಂನನ್ನು ಮೊದಲು ತನ್ನ ಬಾಕಿ ನೀಡುವಂತೆ ತಾಕೀತು ಮಾಡುತ್ತಿದ್ದಂತೆ, ಇಬ್ಬರ ನಡುವೆ ಮಾತುಕತೆ ಹೆಚ್ಚಾಗಿ ಘರ್ಷಣೆ ಹಂತ ತಲುಪಿದೆ.
ಅಂಗಡಿಯವ, ಆತನ ಸಂಬಂಧಿಕರೆಲ್ಲರೂ ಸೇರಿ ಸಲೀಂ ಮೇಲೆ ಹಲ್ಲೆ ನಡೆಸಿದ್ದಾರೆ. ಅವರ ಹೊಡೆತ ತಾಳಲಾರದೆ ಸಲೀಂ ನೇರವಾಗಿ ಅಂಗಡಿಯ ಪಕ್ಕದ ರೈಲ್ವೇ ಹಳಿ ಬಳಿ ಬಂದಿದ್ದಾನೆ. ಅದೇ ಸಮಯದಲ್ಲಿ ವೇಗವಾಗಿ ಬರುತ್ತಿದ್ದ ರೈಲಿಗೆ ಅಡ್ಡ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಣ್ಣೆದುರೇ ಈ ದುರಂತ ಸಂಭವಿಸಿದ್ದರಿಂದ ಅಲ್ಲುದ್ದವರೆಲ್ಲರೂ ಬೆಚ್ಚಿಬಿದ್ದರು. ಎಲ್ಲವೂ ಸೆಕೆಂಡ್ ಗಳಲ್ಲಿ ನಡೆದಿದೆ.
ಈ ಅಮಾನವೀಯ ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಯುವಕನ ಆತ್ಮಹತ್ಯೆಗೆ ಕಾರಣರಾದ ಅಂಗಡಿಯವ ಸೇರಿದಂತೆ ಏಳು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಐಪಿಸಿ ಸೆಕ್ಷನ್ 147,323,306 ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ.
In UP's Etawah, a disturbing video of a man identified as Salim, 35, emerging from a crowd near railway tracks and dying by suicide has surfaced. It is being alleged that victim was beaten up duing a monetary dispute of Rs 20 at a shop when he took the extreme step. pic.twitter.com/V8kruFmhuQ
— Piyush Rai (@Benarasiyaa) December 15, 2022