ಹೊಸದಿಗಂತ ಡಿಜಿಟಲ್ ಡೆಸ್ಕ್:
ಏರ್ ಇಂಡಿಯಾ ವಿಮಾನ ನಿಲ್ದಾಣದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣದ ಆರೋಪಿ ಶಂಕರ್ ಮಿಶ್ರಾರನ್ನು ದೆಹಲಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಪ್ರಕರಣ ಬೆಳಕಿಗೆ ಬಂದ ನಂತರ ಆತ ಪರಾರಿಯಾಗಿದ್ದು, ಆತನ ಪತ್ತೆಗೆ ಲುಕ್ಔಟ್ ನೊಟೀಸ್ ಹಾಕಲಾಗಿತ್ತು. ನ.26ರಂದು ಮಿಶ್ರಾ ನ್ಯೂಯಾರ್ಕ್-ದೆಹಲಿ ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಮಹಿಳೆ ದೂರು ನೀಡಿದ್ದರು.
ಶಂಕರ್ ಮಿಶ್ರಾ ವಕೀಲರು ದೂರು ದಾಖಲಿಸಿದ ಮಹಿಳೆಯ ಜತೆ ಮಾತನಾಡಿ, 15 ಸಾವಿರ ರೂಪಾಯಿ ಪರಿಹಾರ ಹಾಗೂ ಬ್ಯಾಗ್, ಬಟ್ಟೆಯನ್ನು ಸ್ವಚ್ಛಗೊಳಿಸುವ ಬಗ್ಗೆ ಮಾತನಾಡಿದ್ದರು. ಇದಕ್ಕೆ ಮಹಿಳೆ ಒಪ್ಪಿದ್ದರು. ಆದರೆ ಇದಾದ ತಿಂಗಳ ನಂತರ ಮಹಿಳೆಯ ಮಗಳು ಹಣ ಬೇಡ ಎಂದು ಹೇಳಿದ್ದರು.
ವಿಮಾನದಲ್ಲಿ ಮಾಡಿದ ಕೆಲಸಕ್ಕಾಗಿ ಶಂಕರ್ ತಮ್ಮ ನೌಕರಿಯನ್ನು ಕಳೆದುಕೊಂಡಿದ್ದಾರೆ. ಉತ್ತಮ ನಡವಳಿಕೆ ಇಲ್ಲದ ಉದ್ಯೋಗಿಗಳು ಬೇಡ ಎಂದು ಕಂಪನಿ ಹೇಳಿದೆ.