ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರಿನ ನಾಗುರಿ ಪರಿಸರದಲ್ಲಿ ಶನಿವಾರ ನಡೆದ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ಬೆನ್ನಲ್ಲೇ, ರಾಜ್ಯಾದ್ಯಂತ ಪೊಲೀಸರ ಹೈ-ಅಲರ್ಟ್ ಘೋಷಿಸಲಾಗಿದೆ. ವಿವಿಧ ಗಡಿ ಭಾಗಗಳಲ್ಲಿ ಪೊಲೀಸರು ವಾಹನಗಳನ್ನು ತಪಾಸಣೆ ಜೊತೆಗೆ ತೀವ್ರ ನಿಗಾ ವಹಿಸಿಕೊಂಡಿದ್ದಾರೆ.
ಸ್ಫೋಟದ ಆರೋಪಿ ಶಾರೀಕ್ ಎಂದು ಗುರಿತಿಸಲಾಗಿದ್ದು,ಆತ ಇದ್ದ ತೀರ್ಥಹಳ್ಳಿಯ ಮನೆಗೂ ಪೊಲೀಸರನ್ನು ಒಳಗೊಂಡಂತೆ ಅಧಿಕಾರಿಗಳ ತಂಡವು ಭೇಟಿ ನೀಡಿ, ಪರಿಶೀಲನೆಯಲ್ಲಿ ತೊಡಗಿದೆ.