ಮಂಗಳೂರು ಸಹಿತ ಹಲವಡೆ ಭಾರೀ ಮಳೆ: ಎಲ್ಲೆಡೆ ಮತ್ತೆ ಕೃತಕ ನೆರೆ

ಹೊಸದಿಗಂತ ವರದಿ ಮಂಗಳೂರು: 

ಶುಕ್ರವಾರ ತಡರಾತ್ರಿಯಿಂದ ಕರಾವಳಿ ಭಾಗದ ಹಲವೆಡೆಗಳಲ್ಲಿ ಮತ್ತೆ ಕುಂದ್ರೋಣ ಮಳೆಯಾಗುತ್ತಿದೆ. ಭಾರಿ ಮಳೆಗೆ ಮಂಗಳೂರು ನಗರದ ಹಲವು ಕಡೆಗಳಲ್ಲಿ ಕೃತಕ ನೆರೆ ಸೃಷ್ಟಿಯಾಗಿದ್ದು, ಜನರು ಮನೆಯಿಂದ ಹೊರಬಾರದ ಸ್ಥಿತಿ ನಿರ್ಮಾಣವಾಗಿದೆ.

ಗುಡುಗು ಸಹಿತ ಭಾರಿ ಮಳೆಯಿಂದ ನಗರದ ತಗ್ಗುಪ್ರದೇಶಗಳು ಜಲಾವೃತಗೊಂಡಿವೆ. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಮುಂಭಾಗ ಮಳೆ ನೀರು ನಿಂತಿದೆ. ಕದ್ರಿಕಂಬಳ, ಕೊಟ್ಟಾರ ಚೌಕಿ ಸಹಿತ ಹಲವೆಡೆ ಕೃತಕ ನೆರೆ ಸಮಸ್ಯೆ ಉಂಟುಮಾಡಿದೆ.

ಪಾಂಡೇಶ್ವರ ಶಿವನಗರದಲ್ಲಿ ಮಳೆಯಿಂದ ಮನೆಗಳು ಜಲಾವೃತಗೊಂಡಿದ್ದು, ಜನರು ಮನೆಯಿಂದ ಹೊರಬರಲಾಗುತ್ತಿಲ್ಲ. ನಗರದ ಬಹುತೇಕ ಕಡೆ ರಸ್ತೆಯಲ್ಲಿ ಮಳೆ ನೀರು ಹರಿಯುತ್ತಿದ್ದು, ವಾಹನ ಸಂಚಾರ ದುಸ್ತರವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!